Advertisement

2020ರ ಮಾರ್ಚ್ ಗೆ ಮಧ್ಯಂತರ ಚುನಾವಣೆ ಖಚಿತ: ಕೆಬಿ ಕೋಳಿವಾಡ ಭವಿಷ್ಯ

10:04 AM Jun 14, 2019 | Nagendra Trasi |

ಬೆಂಗಳೂರು:2020ರ ಮಾರ್ಚ್ ವೇಳೆಗೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಅವರು ಗುರುವಾರ ಭವಿಷ್ಯ ನುಡಿದಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನಿವಾರ್ಯ ಪರಿಸ್ಥಿತಿಯಲ್ಲಿ ಅವಕಾಶವಾದಿಗಳು ಮೇಲುಗೈ ಸಾಧಿಸಲಿದ್ದಾರೆ. ಹೀಗಾಗಿ ಮಧ್ಯಂತರ ಚುನಾವಣೆ ಬಂದೇ ಬರುತ್ತದೆ ಎಂಬುದಕ್ಕೆ ನನ್ನ ಬಳಿ ಹಲವು ಕಾರಣಗಳಿವೆ ಎಂದರು.

ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಆದರೂ ಅವಕಾಶವಾದಿಗಳು ಮೇಲುಗೈ ಸಾಧಿಸಲು ಪಕ್ಷದ ಮುಖಂಡರು ಅವಕಾಶ ನೀಡಲ್ಲ ಎಂಬ ನಂಬಿಕೆ ಇದೆ ಎಂದ ಕೋಳಿವಾಡ ಅವರು, ಪಕ್ಷೇತರ ಶಾಸಕ ಆರ್. ಶಂಕರ್ ದೊಡ್ಡ ಅವಕಾಶವಾದಿ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next