Advertisement

ನಿಡಗುಂದಾ ಪತ್ತಿನ ಸಂಘಕ್ಕೆ 2.45ಕೋಟಿ ಮಂಜೂರಿ

01:25 PM Sep 07, 2022 | Team Udayavani |

ಚಿಂಚೋಳಿ: ಸೇಡಂ ವಿಧಾನಸಭೆ ಮತಕ್ಷೇತ್ರದ ತಾಲೂಕಿನ ನಿಡಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ 2.45ಕೋಟಿ ರೂ. ಬಡ್ಡಿರಹಿತ ಸಾಲವನ್ನು ರೈತರಿಗೆ ಮಂಜೂರಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಮುಕುಂದ ದೇಶಪಾಂಡೆ ತಿಳಿಸಿದ್ದಾರೆ.

Advertisement

ನಿಡಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ನಿಡಗುಂದಾ ವಿಎಸ್‌ಎಸ್‌ಎನ್‌ಗೆ ಸೇಡಂ ಶಾಸಕರು ನಮ್ಮ ಗ್ರಾಮದ 340 ಹೊಸ ರೈತರಿಗೆ ಬಡ್ಡಿ ರಹಿತ ಸಾಲ ಮಂಜೂರಿಗೊಳಿಸಿದ್ದಾರೆ. ಬಿಜೆಪಿ ಸರ್ಕಾರ ರೈತರ ಮೇಲಿನ ಕಾಳಜಿಯಿಂದ ಬಡ್ಡಿ ರಹಿತ ಸಾಲ ನೀಡುತ್ತಿದ್ದಾರೆ ಎಂದರು.

ನಿಡಗುಂದಾ ಗ್ರಾಪಂ ಅಧ್ಯಕ್ಷ ಮಂಜುನಾಥ ಶಂಕರ ಮಾತನಾಡಿ, ಶಾಸಕರು ರೈತರಿಗೆ ಬಡ್ಡಿರಹಿತ ಸಾಲವನ್ನು ಮಂಜೂರಿ ಮಾಡಿರುವುದಕ್ಕೆ ಹರ್ಷವಾಗಿದೆ ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷೆ ಸೂರತಿ ಬಸವರಾಜ ಕಪಾಳ, ಲಾಲಪ್ಪ ಕಟ್ಟಿಮನಿ, ಶರಣಬಸಪ್ಪ, ರವಿ ಕೊಡಂಪಳ್ಳಿ, ರಹೀಮ, ಅನಿಲ, ನಾಗಭೂಷಣ, ಆಡಳಿತಾ ಧಿಕಾರಿ ಚಂದು ರೋಂಪಳ್ಳಿ ಹಾಗೂ ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next