Advertisement

ಜಗಜೀವನರಾಂಗೆ ಅಪಮಾನ: ಪ್ರತಿಭಟನೆ

10:02 AM Nov 07, 2021 | Team Udayavani |

ಕಲಬುರಗಿ: ನಗರದ ಟೌನ್‌ ಹಾಲ್‌ ಮುಂಭಾಗದ ಮುಖ್ಯ ರಸ್ತೆ ಪಕ್ಕದಲ್ಲಿ ಸ್ಥಾಪಿಸಲಾಗಿದ್ದ ನಾಮಫಲಕದಲ್ಲಿನ ಡಾ| ಬಾಬು ಜಗಜೀವನರಾಂ ಭಾವಚಿತ್ರ ಹರಿದು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಡಾ| ಬಾಬು ಜಗಜೀವನರಾಂ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಟೌನ್‌ಹಾಲ್‌ ಆವರಣದಲ್ಲಿರುವ ಡಾ| ಬಾಬು ಜಗಜೀವನರಾಂ ಪುತ್ಥಳಿ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದುಹಾಕಿ ಅವಮಾನಗೊಳಿಸಿದ್ದಾರೆ. ತಕ್ಷಣವೇ ಕಿಡಿಗೇಡಿಗಳನ್ನು ಪತ್ತೆ ಮಾಡಬೇಕೆಂದು ಮುಖಂಡರು ಮತ್ತು ಕಾರ್ಯಕರ್ತರು ಕೆಲ ಕಾಲ ರಸ್ತೆ ತಡೆ ನಡೆಸಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ, ಮುಖಂಡರಾದ ರಾಹುಲ್‌ ಮೇತ್ರೆ, ಸಚಿನ್‌ ಕಟ್ಟಿಮನಿ, ಪ್ರದೀಪ ಭವೆ, ದಶರಥ ಕಲಗುರ್ತಿ, ವಿಠ್ಠಲ ವಾಲೀಕಾರ, ಮಲ್ಲಿಕಾರ್ಜುನ ಸರಡಗಿ, ಪ್ರಕಾಶ ಮಾಳಗೆ, ಹನಮಂತ ರತ್ನಡಗಿ, ಬಂಡೇಶ ರತ್ನಡಗಿ, ಮರಲಿಂಗ ಅಣಗಿ, ಅಶ್ವತ್ಥ್ ತಾರಫೈಲ್‌, ಸುರೇಶ ಇಟಗಿ, ಸಚಿನ್‌ ತಾರಫೈಲ್‌, ಹರೀಶ್ಚಂದ್ರ ದೊಡ್ಡಮನಿ, ಲೋಹಿತ ರಾಜಾಪುರ, ಪ್ರಶಾಂತ ಬಾಪು ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next