Advertisement

ನಾಲ್ವರಿಗೆ ಪ್ರತ್ಯೇಕವಾಸಕ್ಕೆ ಸೂಚನೆ

05:08 PM Mar 22, 2020 | Team Udayavani |

ಹುಣಸೂರು: ದುಬೈನಿಂದ ವಾಪಸ್‌ ಆಗಿರುವ ನಗರದ ಇಬ್ಬರು ಹಾಗೂ ಅಜ್ಮೀರ್‌ನಿಂದ ಹಿಂದಿರುಗಿದ ಗುರುಪುರದ ತಾಯಿ- ಮಗ ಸೇರಿದಂತೆ ನಾಲ್ವರಿಗೆ ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವ ಸೂಚಿಸಲಾಗಿದೆ.

Advertisement

ನಗರದ ನರಸಿಂಹಸ್ವಾಮಿತಿಟ್ಟು ಬಡಾವಣೆಯ ಮುಸ್ತಫಾ ಹಾಗೂ ಸದಾಶಿವನಕೊಪ್ಪಲಿನ ಕುಮಾರ್‌ 3 ದಿನಗಳ ಹಿಂದಷ್ಟೆ ದುಬೈನಿಂದ ಬಂದಿದ್ದರು. ತಹಶೀಲ್ದಾರ್‌ ಬಸವರಾಜ್‌ ಸೂಚನೆಯಂತೆ ಮುಂಜಾನೆಯೇ ನರಸಿಂಹಸ್ವಾಮಿ ತಿಟ್ಟಿನ ಮುಸ್ತಫಾ ಹಾಗೂ ಸದಾಶಿವನಕೊಪ್ಪಲಿನ ಕುಮಾರ್‌ ಅವರ ಮನೆಗೆ ಪೊಲೀಸ್‌ ಸಿಬ್ಬಂದಿ ಸಮೇತ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್‌ ನೇತೃತ್ವದ ಆರೋಗ್ಯ ಇಲಾಖೆನಸಿಬ್ಬಂದಿ ತಂಡ ಪರಿಶೀಲಿಸಿ, ಮನೆಯಲ್ಲೇ ಇರುವಂತೆ ತಿಳಿಸಿದೆ.

ಗುರುಪುರ ಬಳಿಯ ಹುಣಸೇಕಟ್ಟೆಯ ತಾಯಿ ಮತ್ತು ಆಕೆಯ ಪುತ್ರ ಅಜ್ಮೀರ್‌ಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅವರಿಗೂ ಕೂಡ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಈ ನಾಲ್ವರ ತಪಾಸಣೆ ನಡೆಸಿದ್ದು, ಆರೋಗ್ಯದಿಂದಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿ ಕುಮಾರ್‌ ಮನವಿ ಮಾಡಿದ್ದಾರೆ.

ಮುಂಬೈಗೆ ತೆರಳಿದ ದಂಪತಿ:ಮುಂಬೈನಿಂದ ಹನಗೋಡು ಬಳಿಯ ಹೆಗ್ಗಂದೂರಿನ ಸಂಬಂಧಿಕರ ಮನೆಗೆ ಬಂದಿದ್ದ ದಂಪತಿಗೆ 15 ದಿನ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದರೆ, ಶನಿವಾರ ಬೆಳಗ್ಗೆ ಮುಂಬೈಗೆ ವಾಪಸ್‌ ಆಗಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಟಿಎಚ್‌ಒ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next