Advertisement

75 ಲಕ್ಷ ರೂ. ವರದಕ್ಷಿಣೆ ಹಣದಲ್ಲಿ ಹಾಸ್ಟೆಲ್‌ 

12:00 AM Nov 26, 2021 | Team Udayavani |

ಜೈಪುರ: ಮಗಳ ಮದುವೆಯಲ್ಲಿ, ವರದಕ್ಷಿಣೆಯಾಗಿ ಕೊಡಲೆಂದು ಕೂಡಿಟ್ಟಿದ್ದ 75 ಲಕ್ಷ ರೂ. ಹಣವನ್ನು ಮದುಮಗಳ ತಂದೆ ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ಕೊಟ್ಟಿರುವ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Advertisement

ರಾಜಸ್ಥಾನದ ಬಾರ್ಮರ್‌ ಪ್ರದೇಶದ ರಾಜಕೀಯ ನಾಯಕ­ರಾಗಿರುವ ಕಿಶೋರ್‌ ಸಿಂಗ್‌ ಕನೋದ್‌ ಅವರ ಮಗಳು ಅಂಜಲಿ ಮದುವೆ ನ.21ರಂದು ನಡೆದಿದೆ. ಮದುವೆಗೆ ಕೆಲವು ದಿನಗಳಿರುವಾಗ ಅಂಜಲಿ, ಕಿಶೋರ್‌ ಬಳಿ, “ವರದಕ್ಷಿಣೆಗಾಗಿ ಕೂಡಿಟ್ಟಿರುವ ಹಣದಲ್ಲಿ ಬಾಲಕಿಯರ ಹಾಸ್ಟೆಲ್‌ ನಿರ್ಮಿಸೋಣ’ ಎಂದು ಮನವಿ ಮಾಡಿದ್ದಾಳೆ.

ಅದಕ್ಕೆ ಕಿಶೋರ್‌ ಒಪ್ಪಿದ್ದು, ಮದುವೆ ಕಾರ್ಯ ಮುಗಿದ ಅನಂತರ, ಮಠಾಧೀಶರಾಗಿರುವ ಪ್ರತಾಪ್‌ ಪುರಿ ಅವರಿಗೆ ಹಣ ನೀಡಿದ್ದಾರೆ. ಪ್ರತಾಪ್‌ ಅವರು ಈಗಾಗಲೇ ಬಾಲಕಿಯರ ಹಾಸ್ಟೆಲ್‌ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಈ ಹಣವನ್ನು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next