Advertisement

ವೀರಸಂದ್ರ ಗ್ರಾಮದ ಕೆರೆ ಜಾಗ ಪರಿಶೀಲನೆ

06:11 PM Jan 12, 2020 | Team Udayavani |

ಆನೇಕಲ್‌ : ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ವೀರಸಂದ್ರ ಗ್ರಾಮದ ಕೆರೆಯ ಅಭಿವೃದ್ಧಿಯ ಹೆಸರಿನಲ್ಲಿ ಕೆಲವು ಖಾಸಗಿ ಕಂಪನಿಗಳು ವೀರಸಂದ್ರ ಗ್ರಾಮಕ್ಕೆ ಹೋಗುವ ಪುರಾತನ ರಸ್ತೆಯ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಕಂದಾಯ ಅಧಿಕಾರಿಗಳಾದ ಶಿವಣ್ಣ ಮತ್ತು ತಹಶೀಲ್ದಾರ್‌ ಮಹದೇವಯ್ಯ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಸದಸ್ಯ ವೀರಸಂದ್ರ ರಾಜೇಂದ್ರಪ್ಪ, ರಾಷ್ಟೀಯ ಹೆದ್ದಾರಿ-7 ರಿಂದ ವೀರಸಂದ್ರ ಗ್ರಾಮಕ್ಕೆ ಬರುವ ರಸ್ತೆಯನ್ನು ಪುರಾತನ ಕಾಲದಿಂದಲೂ ನಾವು ಬಳಸುತ್ತಿದ್ದೇವೆ. ಜೊತೆಗೆ ಈ ರಸ್ತೆಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳಿವೆ. ಆದರೆ ವೀರಸಂದ್ರ ಕೆರೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕೆಲ ಖಾಸಗಿ ಕಂಪನಿಗಳು ರಸ್ತೆ ಮುಚ್ಚಿ ರಸ್ತೆಯ ಜಾಗವನ್ನು ಕಬಳಿಕೆ ಮಾಡಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಲು ಮುಂದಾಗಿದ್ದಾರೆ, ಇದನ್ನು ಪ್ರಶ್ನಿಸಿದಕ್ಕೆ ನಮ್ಮ ವಿರುದ್ಧವೇ ಪೊಲೀಸ್‌ ಠಾಣೆಗೆ ದೂರು ನೀಡಿವೆ.ನಮಗೆ ಯಾವುದೇ ಕೆರೆಯ ಅಭಿವೃದ್ಧಿ ಬೇಡ, ನಮ್ಮ ಗ್ರಾಮಕ್ಕೆ ಹೋಗುತ್ತಿದ್ದ ರಸ್ತೆಯೇ ಬೇಕು ಎಂದು ಅಧಿಕಾರಿಗಳಿಗೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಶಿವಣ್ಣ ಮತ್ತು ತಹಶೀಲ್ದಾರ್‌ ಮಹಾದೇವಯ್ಯ ಮಾತನಾಡಿ, ವೀರಸಂದ್ರ ಗ್ರಾಮದ ಜನರ ಮತ್ತು ಖಾಸಗಿ ಕಂಪನಿಗಳ ಸಮಸ್ಯೆಗಳನ್ನು ಖುದ್ದಾಗಿ ಕೇಳಿದ್ದು, ಕೂಡಲೇ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next