Advertisement

Covid Case ಸಂಪಾಜೆಯಲ್ಲಿ ತಪಾಸಣೆ ಆರಂಭ

12:11 AM Dec 19, 2023 | Team Udayavani |

ಅರಂತೋಡು: ಮತ್ತೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಅಂತಾ ರಾಜ್ಯ, ಅಂತರ್‌ ಜಿಲ್ಲೆಯ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾರಂಭಿಸಿದೆ.

Advertisement

ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸುಳ್ಯ – ಮಡಿಕೇರಿ ಮಧ್ಯೆ ಇರುವ ಸಂಪಾಜೆಯ ಚೆಕ್‌ಪೋಸ್ಟ್ ನಲ್ಲಿ ಈಗಾಗಲೇ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ.

ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ದಿನೇದಿನೆ ವೃದ್ಧಿಸುತ್ತಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ಕೇರಳದ ಸಂಪರ್ಕ ಹೊಂದಿರುವ ಮತ್ತು ಕೇರಳ ಮೂಲದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಗುವ ಕಾರಣ ಕೇರಳ ರಾಜ್ಯದ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದೇ ವೇಳೆ ಜಿಲ್ಲೆಯ
ಎಲ್ಲ ಆಸ್ಪತ್ರೆಗಳು ಸಂಭಾವ್ಯ ಸಮಸ್ಯೆಯನ್ನು ನಿಭಾಯಿಸಲು ಸಜ್ಜಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next