Advertisement

ಶಿಕ್ಷಕರ ಗುರುಭವನಕ್ಕಾಗಿ ನಿವೇಶನ ನೀಡಲು ಒತ್ತಾಯ

04:15 PM May 06, 2022 | Team Udayavani |

ಭಾಲ್ಕಿ: ಪಟ್ಟಣದಲ್ಲಿ ಶಿಕ್ಷಕರ ಗುರುಭವನ ನಿರ್ಮಾಣಕ್ಕಾಗಿ ಸೂಕ್ತ ನಿವೇಶನ ಒದಗಿಸಿ ಕೊಡುವಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

Advertisement

ಈ ಕುರಿತು ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ ನೇತೃತ್ವದ ನಿಯೋಗ ಶಾಸಕ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಪಟ್ಟಣದಲ್ಲಿ ಶಿಕ್ಷಕರ ಸಭೆ, ಸಮಾರಂಭ ಸೇರಿ ಮತ್ತಿತರ ಕಾರ್ಯಕ್ರಮ ನಡೆಸಲು ತೊಂದರೆ ಆಗುತ್ತಿದೆ. ಶಿಕ್ಷಕರಿಗೆ ಗುರು ಭವನದ ಅಗತ್ಯವಿದ್ದು, ಪಟ್ಟಣದ ಬ್ರಹ್ಮಕುಮಾರಿ ಆಶ್ರಮ ಸಮೀಪದ ಅಷ್ಟೂರೆ ಬಡಾವಣೆಯಲ್ಲಿ ನಿವೇಶನ ಕೊಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ನಾಗಭೂಷಣ ಮಾಮಡಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ಬಸಪ್ಪ ನೇಳಗೆ, ಬಾಲಾಜಿ ಬೈರಾಗಿ, ಬಸವರಾಜ ಮಡಿವಾಳ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next