Advertisement

ಬೆಂಕಿಗೆ ಆಹುತಿಯಾದ ಈರುಳ್ಳಿಗೆ ಪರಿಹಾರ ನೀಡಲು ಒತ್ತಾಯ

03:32 PM Apr 08, 2022 | Team Udayavani |

ಹೊಸಪೇಟೆ: ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇತ್ತೀಚಿಗೆ ಆಕಸ್ಮಿಕ ಬೆಂಕಿಗೆ ನಾಶವಾದ ಈರುಳ್ಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ರಾಜ್ಯ ಈರುಳಿ ಬೆಳೆಗಾರರ ಸಂಘದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.

Advertisement

ತಾಲೂಕು ಗಾದಿಗನೂರು ಗ್ರಾಮದಲ್ಲಿ ರೈತ ರುದ್ರಪ್ಪ ಎಂಬುವ ಈರುಳ್ಳಿ ಸಂಗ್ರಾಹಣ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು 5 ಲಕ್ಷ ರೂ. ಗಳೊಷ್ಟು ನಷ್ಟವಾಗಿದೆ. ಕೂಡಲೇ ಅಧಿಕಾರಿಗಳು ಅನಾಹುತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೊಂದ ರೈತನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಎನ್‌.ಎಂ. ಸಿದ್ದೇಶ್‌, ಪ್ರಧಾನ ಕಾರ್ಯದರ್ಶಿ ಎಚ್‌.ಉಮೇಶ್‌, ಮುಖಂಡರಾದ ಹರಳ್ಳಿ ರವೀಂದ್ರ, ರಾಜು, ಶರಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next