Advertisement
ರಾಷ್ಟ್ರೀಯ ರೈತ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ.ಜಿ.ಪಂ. ತೋಟಗಾರಿಕಾ ಇಲಾಖೆ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲ್ಬೈಲ್ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣ ದಲ್ಲಿ ಗುರುವಾರ “ಕಲ್ಪವೃಕ್ಷಕ್ಕೆ ಕೀಟ – ಕಾಟ’ ವಿಷಯದ ಕುರಿತು ನಡೆದ ರೈತ- ವಿಜ್ಞಾನಿ- ಅಧಿಕಾರಿ- ಮಾಧ್ಯಮಗಳ ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೀಟ ಬಾಧೆಯಿಂದ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಲಭ್ಯವಿಲ್ಲ. ಸರಕಾರ ಮಧ್ಯ ಪ್ರವೇಶಿಸಿ ರೈತರಿಗೆ ನೆರವಾಗುವ ಅಗತ್ಯ ಇದೆ ಎಂದರು.
ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ತೆಂಗು ಸಂಸ್ಕರಣೆಗೆ ವ್ಯವಸ್ಥೆಯನ್ನು ನಾವು ಮಾಡುವ ಆವಶ್ಯಕತೆ ಇದೆ ಎಂದರು. ಫಿಶರೀಸ್ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ| ಎಸ್.ಎಂ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ| ಎಚ್.ಆರ್. ನಾಯ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿಇಒ ಸತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್. ಕೆಂಪೇ ಗೌಡ, ಬೆಂಗಳೂರಿನ ಎನ್ಬಿಎಐಆರ್ ಮುಖ್ಯ ವಿಜ್ಞಾನಿ ಡಾ| ಶೈಲೇಶ್, ಕಾಸರಗೋಡು ಸಿಪಿಸಿಆರ್ಐ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಉಡುಪಿಯ ಜಂಟಿ ಕೃಷಿ ನಿರ್ದೇಶಕರಾದ ಭುವನೇಶ್ವರಿ, ಕದ್ರಿ ನವನೀತ್ ಶೆಟ್ಟಿ, ರಾಮಕೃಷ್ಣ ಅವರು ವೇದಿಕೆಯಲ್ಲಿದ್ದರು. ವಿಜಯಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್ ಸ್ವಾಗತಿಸಿದರು. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಶಿವಕುಮಾರ್ ಮಗದ ನಿರ್ವಹಿಸಿದರು.