Advertisement

ಇನ್ಫೋಸಿಸ್‌ ಫೌಂಡೇಶನ್‌ ದ.ಕ. ಜಿಲ್ಲೆಗೆ 2ನೇ ಹಂತದ ನೆರವು

10:15 AM Mar 31, 2020 | sudhir |

ಮಂಗಳೂರು: ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಡಾ| ಸುಧಾಮೂರ್ತಿ ಅವರು ಪೊಲೀಸ್‌ ಇಲಾಖೆಯ ಮನವಿಗೆ ಸ್ಪಂದಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಹಂತದಲ್ಲಿ 73 ಲಕ್ಷ ರೂ.ಗಳ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

Advertisement

ಡಾ| ಸುಧಾಮೂರ್ತಿ ಅವರು ಕೋವಿಡ್ 19 ಚಿಕಿತ್ಸೆ ನಿರ್ವಹಣೆಗೆಂದು ಶನಿವಾರ ಜಿಲ್ಲೆಗೆ 28 ಲಕ್ಷ ರೂ. ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ್ದರು.

ಎರಡನೇ ಹಂತದಲ್ಲಿ ಎನ್‌-95 ಮಾಸ್ಕ್, ಸ್ಯಾನಿಟೈಸರ್‌, ವೈದ್ಯಕೀಯ ರಕ್ಷಣಾ ಸಲಕರಣೆ ಸಹಿತ ವಿವಿಧ ಸಾಮಗ್ರಿಗಳು ಬಂದಿವೆ. ಅವುಗಳನ್ನು ವೈದ್ಯರು, ದಾದಿಯರು, ವೆನಾÉಕ್‌ ಆಸ್ಪತ್ರೆಯಲ್ಲಿರುವ ಸಿಬಂದಿಗೆ ನೀಡಲಾಗುತ್ತದೆ. ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಇಲಾಖೆ ಸಿಬಂದಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಮಾಸ್ಕ್ ವಿತರಿಸಲಾಗುತ್ತದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಹರ್ಷ ಅವರು ಡಾ| ಸುಧಾಮೂರ್ತಿ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ನ ರಾಮದಾಸ್‌ ಕಾಮತ್‌ ಮತ್ತು ಅವರ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next