Advertisement

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನತೆ

12:17 PM Feb 27, 2023 | Team Udayavani |

ಕನಕಪುರ: ನಗರದಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿಗಳ ನಿರ್ಲಕ್ಷದಿಂದ ಸ್ವತ್ಛತೆ ಮರೀಚಿಕೆಯಾಗಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಗರಸಭೆ ತುರ್ತು ಸಂದರ್ಭಗಳಲ್ಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೆ ಹೊಣೆಗೇಡಿತನ ಪ್ರದರ್ಶನ ಮಾಡುತ್ತಿದೆ. ಇದರ ಪರಿಣಾಮ ನಗರದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.

ವಾರ್ಡ್‌ಗಳಲ್ಲಿ ನಾನಾ ಸಮಸ್ಯೆ: ಕೆಲ ದಿನಗಳಿಂದ ಕೆಲವು ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕಾಯಂ ನೌಕರರು ಇದ್ದರೂ ಸಹ ಅವರಿಂದ ನಗರದಲ್ಲಿ ಆಗಬೇಕಿದ್ದ ಕೆಲಸ ಕಾರ್ಯಗಳನ್ನು ಮಾಡುವ ಇಚ್ಛಾಸಕ್ತಿ ತೋರುತ್ತಿಲ್ಲ. ಕೆಲವು ವಾರ್ಡ್ ಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಸಹ ತಲೆದೋರಿದೆ. ಕೆಲ ನೌಕ ರರು ಪ್ರತಿಭಟನೆ ಮಾಡುತ್ತಿರುವುದನ್ನೇ ನೆಪ ಮಾಡಿಕೊಂಡು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವಸ್ತು ಪ್ರದರ್ಶನಕಿದ್ಯಾ ಚಿರಶಾಂತಿ ವಾಹನ? ಕಳೆದ ನಾಲ್ಕು ದಿನಗಳಿಂದ ದಿನ ಬಳಕೆ ಹಾಗೂ ಕುಡಿಯುವ ನೀರಿನ ಪೂರೈಕೆ ಅಸಮರ್ಪಕವಾಗಿದೆ. ನಗರಕ್ಕೆ ಕಾವೇರಿ ನೀರು ಪೂರೈಸುವ ಪೈಪ್ಲೆ„ನ್‌ ಒಡೆದು ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಅದರ ದುರಸ್ತಿಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳದೆ ವಿಳಂಬ ಮಾಡುತ್ತಿದ್ದಾರೆ. ದಿನಬಳಕೆ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ. ನಗರಸಭೆ ಇದ್ದು ಇಲ್ಲದಂತಾಗಿದೆ. ನಗರದಲ್ಲಿ ಯಾರಾದರೂ ಮೃತಪಟ್ಟರೆ ಚಿರಶಾಂತಿ ವಾಹನ ವಸ್ತು ಪ್ರದರ್ಶನಕ್ಕೆ ಇಟ್ಟಂತಾಗಿದೆ. ಲಕ್ಷಾಂತರ ರೂ.ವ್ಯಯಿಸಿ ವಾಹನ ಖರೀದಿಸಿರುವ ನಗರಸಭೆ ಅಧಿ ಖಾರಿಗಳು, ಈ ವಾಹನಕ್ಕೆ ಚಾಲಕನನ್ನೇ ನೇಮಿಸಿಲ್ಲ. ವಾಹನ ಇದ್ದರೇ ಚಾಲಕನಿ ಲ್ಲ, ಇಂಧನವಿಲ್ಲ ಎಂಬ ಸಬೂಬುಗಳನ್ನು ಹೇಳಿ ಸಾರ್ವಜನಿಕರ ಬಳಕೆಗೆ ಕೊಡದೆ ವಾಹನ ತುಕ್ಕು ಹಿಡಿಯುತ್ತಿದೆ ಎಂದು ದೂರಿದರು.

ಪೌರಾಯುಕ್ತರಿಲ್ಲ: ನಗರಸಭೆ ಪೌರಾ ಯುಕ್ತರು ವರ್ಗಾವಣೆಗೊಂಡು ಹಲವು ದಿನಗಳು ಕಳೆಯುತ್ತಾ ಬಂದಿದೆ. ಪ್ರಭಾರ ಪೌರಾಯುಕ್ತರು ಮತ್ತು ಎಇಇ ಧನಂಜಯ ಹಾಗೂ ನಗರಸಭೆ ಸಿಬ್ಬಂದಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾರ್ವಜನಿಕರು ಕಚೇರಿಗೆ ಅಲೆದಾ ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭವಾಗುತ್ತಿದೆ. ವಾಹನಗಳ ಓಡಾಟದಿಂದ ನಗರದಲ್ಲಿ ಸಂಪೂರ್ಣವಾಗಿ ಧೂಳು ಆವರಿಸಿ, ಸಾರ್ವಜನಿಕರು ಓಡಾಟಕ್ಕೂ ತೊಂದರೆ ಯಾಗಿದೆ. ಧೂಳಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಮಾತ್ರ ರಸ್ತೆಗೆ ನೀರನ್ನು ಸಿಂಪಡಿಸಲು ಮುಂದಾಗಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಯೋಜನಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಇರುವ ಕಾಯಂ ನೌಕರರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಗರದಲ್ಲಿ ಸ್ವತ್ಛತೆ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

Advertisement

ನೀರಿನ ಪೈಪ್‌ನಲ್ಲಿ ಚರಂಡಿ ನೀರು ಮಿಶ್ರಣ : ನಗರದಲ್ಲಿ ನಗರಸಭೆಯಿಂದ ಕೈಗೊಳ್ಳುವ ಚರಂಡಿ ಇತರೆ ಕಾಮಗಾರಿಗಳಿಗೆ ಗುತ್ತಿಗೆದಾರರು ಎಲ್ಲೆಂದರಲ್ಲಿ ಜಲ್ಲಿ ಮರಳು ಸುರಿದು ಜನರ ಓಡಾಟಕ್ಕೆ ತೊಂದರೆ ಮಾಡಿದ್ದಾರೆ. ಚರಂಡಿ ಕಾಮಗಾರಿ ಆರಂಭಿಸಿ ತಿಂಗಳುಗಳೇ ಕಳೆದರೂ ಕಾಮಗಾರಿ ಮುಗಿದಿಲ್ಲ. ಜನ ತಮ್ಮ ಮನೆಗಳಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ವಿಳಂಬದಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗದೇ ದುರ್ನಾತ ಬೀರಿದೆ. ನಗರಸಭೆಗೆ ಮಾಹಿತಿ ನೀಡಿದರು ಯಾ ವುದೇ ಪ್ರಯೋಜನವಾಗಿಲ್ಲ. ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ ಗಳು ಒಡೆದು ದಿನಬಳಕೆಗೂ ಯೋಗ್ಯವಲ್ಲದ ಕಲುಷಿತ ನೀರು ಮನೆಗಳಿಗೆ ಪೂರೈಕೆಯಾಗುತ್ತಿದೆ ಅದನ್ನು ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ .

ನಗರಸಭೆ ಕಸಸಾಗಣೆ ಮಾಡುವ ವಾಹನ ಚಾಲಕರ ಪ್ರತಿಭಟನೆಯಿಂದ ನಗರದ ವಾರ್ಡ್‌ಗಳಲ್ಲಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ನಾಲ್ಕು ದಿನಗಳಿಂದ ಕಸ ವಿಲೇವಾರಿ ಆಗಿಲ್ಲ. ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದೆ ನಗರಸಭೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಕ್ಷೇತ್ರದ ಜನಪ್ರತಿನಿ ಧಿಗಳು ಮಧ್ಯಪ್ರವೇಶ ಮಾಡಿ ಪ್ರತಿಭಟನೆ ಮಾಡುತ್ತಿರುವ ನೌಕರರ ಮನವೊಲಿಸಲಿ. ಸ್ಟುಡಿಯೋ ಚಂದ್ರು, ,ನಗರಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next