Advertisement

ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿಲ್ಲ ಮೇಲ್ಛಾವಣಿ ವ್ಯವಸ್ಥೆ

03:36 PM Aug 09, 2022 | Team Udayavani |

ಉಡುಪಿ: ಜಿಲ್ಲಾ ಕೇಂದ್ರದಲ್ಲಿರುವ ಇಂದ್ರಾಳಿಯ ರೈಲ್ವೇ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಮಂದಿ ಪ್ರಯಾಣಿಕರು, ಹತ್ತಾರು ರೈಲು ಬಂದುಹೋಗುತ್ತಿದ್ದರೂ ಸೂಕ್ತ ಮೂಲ ಸೌಕರ್ಯಗಳು ಇಲ್ಲದಂತಾಗಿದೆ. ರೈಲು ಹತ್ತುವ ಮತ್ತು ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯಾವುದೇ ಛಾವಣಿ ವ್ಯವಸ್ಥೆಯೂ ನಿಲ್ದಾಣದಲ್ಲಿಲ್ಲ.

Advertisement

ಕರಾವಳಿ ಹಾಗೂ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇ ಉಡುಪಿ ನಿಲ್ದಾಣವು ರತ್ನಗಿರಿ ಮತ್ತು ಮಡ್ಗಾಂವ್‌ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ಸಾಮಾನ್ಯ ವಾಣಿಜ್ಯ ವಹಿವಾಟು ಇರುವ ನಿಲ್ದಾಣ. ದಿನವೊಂದಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದರೂ ಮೂಲ ಆವಶ್ಯಕತೆ ಪೂರೈಸಲು ಇನ್ನೂ ಕಾರ್ಯ ಸಾಧ್ಯವಾಗಲಿಲ್ಲ.

ಬಿಸಿಲು-ಮಳೆಗೆ ಸಂಕಷ್ಟ

ರೈಲು ನಿಲ್ದಾಣದಲ್ಲಿ ಬಿಸಿಲು ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ಛಾವಣಿ ವ್ಯವಸ್ಥೆಯ ಅಗತ್ಯವಿದೆ. ಒಂದನೇ ಪ್ಲಾಟ್‌ಫಾರ್ಮ್ನ ಕೋಚ್‌ ಪೊಸಿಶನ್‌ 1ರಿಂದ 24ರವರೆಗೆ ಛಾವ ಣಿಗಳ ಸಮಸ್ಯೆ ಕಂಡುಬರುತ್ತಿದೆ.

ಕೆಲವೆಡೆ ಛಾವ ಣಿಗಳು ಇದ್ದರೂ ಪೂರ್ಣವಾಗಿಲ್ಲ. ಮತ್ತೆ ಕೆಲವೆಡೆ ಛಾವ ಣಿಯೇ ಇಲ್ಲದಂತಾಗಿದೆ. ಸಾರ್ವಜನಿಕರ ಉಪಯೋಗಕ್ಕೆಂದು ಮಾಡಿದ ಮೇಲ್ಸೇತುವೆಯಲ್ಲಿಯೂ ಮೇಲ್ಛಾವಣಿ ಇಲ್ಲದ ಕಾರಣ ರೋಗಿಗಳು, ಹಿರಿಯ ನಾಗರಿಕರು, ಮಕ್ಕಳಿಗೆ ಇಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಕೇವಲ ಒಂದೆರಡು ನಿಮಿಷ ನಿಲ್ಲುವ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿರುತ್ತಾರೆ. ಈ ವೇಳೆ ಲಗೇಜ್‌ನೊಂದಿಗೆ ಬಿಸಿಲು, ಮಳೆ ಇದ್ದ ರೆ ತೆರಳಲು ಹರ ಸಾಹಸ ಪಡುವಂತಾಗಿದೆ.

Advertisement

ಉಪಯೋಗಕ್ಕಿಲ್ಲದ ಎಸ್ಕಲೇಟರ್‌

ಕೊಂಕಣ ರೈಲ್ವೇಯಿಂದ ರೈಲು ನಿಲ್ದಾಣದಲ್ಲಿ 2016ರಂದು ಉದ್ಘಾಟಿಸಿದ್ದ ಎಸ್ಕಲೇಟರ್‌ ಪ್ರಯಾಣಿಕರ ಉಪಯೋಗಕ್ಕಿಲ್ಲದಂತಾಗಿದೆ. ಉದ್ಘಾಟನೆಗೊಂಡ ಕೆಲ ದಿನಗಳ ಕಾಲ ಮಾತ್ರ ಕಾರ್ಯಾಚರಿಸಿದ್ದ ಈ ಎಸ್ಕಲೇಟರ್‌ ಅನಂತರ ನಿಷ್ಪ್ರಯೋಜಕವಾಗಿದೆ. ಇದನ್ನು ಪ್ರಯಾಣಿಕರ ಉಪಯೋಗ ಮಾಡಬೇಕು ಎಂದು ಹಲವಾರು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಎಸ್ಕಲೇಟರ್‌ನಲ್ಲಿ ಧೂಳು ತುಂಬಿದೆ.

ಕೇಂದ್ರ ಸಚಿವರಿಗೆ ಮನವಿ: ಇಂದ್ರಾಳಿ ರೈಲ್ವೇಗೆ ಬೇಕಿರುವ ಮೇಲ್ಛಾವಣಿ ವ್ಯವಸ್ಥೆ ಹಾಗೂ ಎಸ್ಕಲೇಟರ್‌ ಸೌಲಭ್ಯದ ದುರಸ್ತಿ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅವರು ದುರಸ್ತಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುವ ಬಗ್ಗೆ ಭರವಸೆ ನೀಡಿದ್ದಾರೆ. –ಶೇಖರ ಎನ್‌. ಕೋಟ್ಯಾನ್‌, ಅಧ್ಯಕ್ಷರು, ರೈಲ್ವೇ ಯಾತ್ರಿ ಸಂಘ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next