Advertisement

ಕೆನಡಾದಲ್ಲಿ ಭಾರತೀಯನ ಬಂಧನ

07:34 PM Apr 10, 2023 | Team Udayavani |

ಒಟ್ಟಾವಾ: ಕೆನಡಾದ ಮರ್ಖಾಂ ನಗರದ ಮಸೀದಿಯೊಂದರಲ್ಲಿ ಪ್ರಾರ್ಥನೆಗೆ ಸೇರಿದ್ದ ಜನರನ್ನು ಬೆದರಿಸಿ, ಧಾರ್ಮಿಕ ದ್ವೇಷದಿಂದಾಗಿ ಅವರ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ್ದಕ್ಕಾಗಿ ಭಾರತೀಯ ಮೂಲದ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.

Advertisement

ಶರಣ್‌ ಕರುಣಾಕರನ್‌ ಎನ್ನುವ ವ್ಯಕ್ತಿ ಮರ್ಖಾಂನ ಇಸ್ಲಾಮಿಕ್‌ ಸೊಸೈಟಿಗೆ ಧಾವಿಸಿ, ಕುರಾನ್‌ ಪ್ರತಿಗಳನ್ನು ಹರಿದುಹಾಕಿದ್ದಾನೆ. ಅಲ್ಲದೇ, ಏಕಾಏಕಿ ಭಕ್ತಾದಿಗಳ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ್ದಾನೆ. ಅವರಿಗೆಲ್ಲ ಬೆದರಿಕೆ ಒಡ್ಡಿ, ಧರ್ಮವಿರೋಧಿ ನಿಂದನೆಗಳನ್ನು ಮಾಡಿದ್ದಾನೆಂದು ಜನರು ಆರೋಪಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next