Advertisement

Explainer:“Boycutt India”…ಏನಿದು ಬಾಂಗ್ಲಾದೇಶದಲ್ಲಿನ ಆನ್‌ ಲೈನ್‌ ಅಭಿಯಾನ ಬೆಳವಣಿಗೆ?

05:26 PM Mar 06, 2024 | Nagendra Trasi |

ಪ್ರವಾಸೋದ್ಯಮ ವಿಚಾರದಲ್ಲಿ ಭಾರತ ಮತ್ತು ಮಾಲ್ಡೀವ್ಸ್‌ ಸಂಬಂಧ ಹಳಸಿದ ಬೆನ್ನಲ್ಲೇ ಇದೀಗ ಶೇಕ್‌ ಹಸೀನಾ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ “Boycutt India” ಅಭಿಯಾನ ಆರಂಭವಾಗಿದೆ. ಬಾಂಗ್ಲಾದೇಶದಲ್ಲಿ ಯಾಕೆ ಈ ಅಭಿಯಾನ ಆರಂಭಗೊಂಡಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Advertisement

ಇದನ್ನೂ ಓದಿ:Rameshwaram Cafe: ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ: ಎನ್‌ಐಎ ಘೋಷಣೆ

ಮುಂಬರುವ ರಮ್ಜಾನ್‌ ಹಾಗೂ ಈದ್‌ ಹಬ್ಬದ ಹಿನ್ನೆಲೆಯಲ್ಲಿ ಭಾರತ ಇತ್ತೀಚೆಗಷ್ಟೇ ಬಾಂಗ್ಲಾದೇಶ ಮತ್ತು ಯುಎಇಗೆ ಈರುಳ್ಳಿ ರಫ್ತು ಮಾಡಲು ನಿರ್ಬಂಧ ತೆರವುಗೊಳಿಸಿ ವಿನಾಯ್ತಿ ನೀಡಿತ್ತು. ಏತನ್ಮಧ್ಯೆ ಬಾಂಗ್ಲಾದೇಶದಲ್ಲಿ ಬಾಯ್ಕಾಟ್‌ ಭಾರತ ಅಭಿಯಾನ ನಡೆಯುತ್ತಿದೆ.

ಏನಿದು Anti India campaign?

ಭಾರತ ಸರ್ಕಾರ ಢಾಕಾದ ಶೇಕ್‌ ಹಸೀನಾ ನೇತೃತ್ವದ ಸರ್ಕಾರದ ಪರವಾಗಿದ್ದು, ಈ ಹಿನ್ನೆಲೆಯಲ್ಲಿ ಶೇಕ್‌ ಹಸೀನಾ ಮತ್ತು ಅವಾಮಿ ಲೀಗ್‌ ಮುಖಂಡರು ಅಧಿಕಾರ ಹಿಡಿದ ನಂತರ ವಿಪಕ್ಷಗಳು ಈ ಬಾಯ್ಕಾಟ್‌ ಇಂಡಿಯಾ ಅಭಿಯಾನ ಆರಂಭಿಸಿರುವುದಾಗಿ ವರದಿ ವಿವರಿಸಿದೆ.

Advertisement

ಸೋಮವಾರ ಭಾರತ ಬಾಂಗ್ಲಾದೇಶಕ್ಕೆ 50,000 ಟನ್‌ ಗಳಷ್ಟು ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದ ನಂತರ ಬಾಂಗ್ಲಾದ ಕೆಲವು ಸಾಮಾಜಿಕ ಜಾಲತಾಣದ ಮೂಲಕ ಬಾಯ್ಕಾಟ್‌ ಇಂಡಿಯಾ ಅಭಿಯಾನ ನಡೆಸುವ ಮೂಲಕ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ದ್ವೇಷವನ್ನು ಹರಡುತ್ತಿರುವುದಾಗಿ ವರದಿ ತಿಳಿಸಿದೆ.

ರಮ್ಜಾನ್‌ ಉಪವಾಸದ ಸಂದರ್ಭದಲ್ಲಿ ಈರುಳ್ಳಿ ಪ್ರಮುಖ ಖಾದ್ಯವನ್ನಾಗಿ ಬಳಸಲಾಗುತ್ತದೆ. ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ ನಂತರ ಇದೀಗ ಸ್ನೇಹಿ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಯುಎಇಗೆ ಈರುಳ್ಳಿ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ. 2023ರ ಡಿಸೆಂಬರ್‌ ನಲ್ಲಿ ಭಾರತ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ನಂತರ ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಂಡಿತ್ತು.

ಅಜ್‌ ಜಜೀರಾ ವರದಿ ಪ್ರಕಾರ, ಢಾಕಾದ ಪಂಥಾಪತ್‌ ಪ್ರದೇಶದಲ್ಲಿ ಸಾಮಾನ್ಯವಾಗಿ ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಅಂಗಡಿಗಳು ಇದೀಗ ಭಾರತೀಯ ಉತ್ಪನ್ನಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿರುವುದಾಗಿ ತಿಳಿಸಿದೆ.

ಢಾಕಾ ಮತ್ತು ಚಿತ್ತಗಾಂಗ್‌ ನಲ್ಲಿರುವ ಹಲವಾರು ಅಂಗಡಿಗಳ ಸಿಬಂದಿಗಳ ಮಾಹಿತಿ ಪ್ರಕಾರ, ಭಾರತೀಯ ಉತ್ಪನ್ನಗಳಾದ ಅಡುಗೆ ಎಣ್ಣೆ, ಸಂಸ್ಕರಿಸಿದ ಆಹಾರ, ಸೌಂದರ್ಯವರ್ಧಕ ಮತ್ತು ಇತರ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಬಾಂಗ್ಲಾದೇಶದಲ್ಲಿನ ಆನ್‌ ಲೈನ್‌ ಅಭಿಯಾನವು ಬಾಂಗ್ಲಾದೇಶಿಗರ ಮತ್ತು ಗಡಿಪಾರುಗೊಂಡವರ ನೇತೃತ್ವದಲ್ಲಿ ಕೆಲವು ಪ್ರದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾಯ್ಕಾಟ್‌ ಇಂಡಿಯಾ ಅಭಿಯಾನದ ಪ್ರಮುಖ ರೂವಾರಿಗಳಲ್ಲಿ ಪ್ಯಾರಿಸ್‌ ಮೂಲದ ಪಿನಾಕಿ ಭಟ್ಟಾಚಾರ್ಯ ಕೂಡಾ ಒಬ್ಬರು ಎಂದು ವರದಿ ತಿಳಿಸಿದೆ.

ಬಾಂಗ್ಲಾದೇಶದಿಂದ ಗಡಿಪಾರುಗೊಂಡ ಬ್ಲಾಗರ್‌, ಜಾಲತಾಣ ಕಾರ್ಯಕರ್ತೆ, ಮಾನವಹಕ್ಕುಗಳ ಹೋರಾಟಗಾರ್ತಿ ಎಂದು ಕರೆದುಕೊಳ್ಳುವ ವೈದ್ಯೆ ಪಿನಾಕಿ ಜನವರಿ ಅಂತ್ಯದಲ್ಲಿ ಇಂಡಿಯಾ ಔಟ್‌ ಅಭಿಯಾನಕ್ಕೆ ಕರೆ ನೀಡಿದ್ದಳು. ಇದರ ಪರಿಣಾಮ ಶೇಕ್‌ ಹಸೀನಾ ಅಧಿಕಾರ ವಹಿಸಿಕೊಂಡ ನಂತರ ಬಾಯ್ಕಾಟ್‌ ಇಂಡಿಯನ್‌ ಪ್ರಾಡಕ್ಟ್ಸ್‌, ಇಂಡಿಯಾ ಔಟ್‌ ಹ್ಯಾಶ್‌ ಟ್ಯಾಗ್‌ ಬಾಂಗ್ಲಾದೇಶದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದವು. ಇದಕ್ಕೆ ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಕ್ಷ ಮತ್ತು ಇಸ್ಲಾಮಿಸ್ಟ್‌ ಪಕ್ಷ ಸಾಥ್‌ ನೀಡಿದ್ದು, ಬಾಂಗ್ಲಾದೇಶ್‌ ಜಮಾತ್‌ ಇ ಇಸ್ಲಾಮಿ ಬಾಯ್ಕಾಟ್‌ ಕರೆಯಿಂದ ದೂರ ಉಳಿದಿದೆ.

2022-23ರಲ್ಲಿ ಬಾಂಗ್ಲಾದೇಶಕ್ಕೆ ರಫ್ತಾದ ಭಾರತದ ಒಟ್ಟು ರಫ್ತಿನ ಶೇ.2.6ರಷ್ಟಿದ್ದ ಕಾರಣ ಉತ್ಪನ್ನಗಳ ಬಹಿಷ್ಕಾರ ಆರ್ಥಿಕವಾಗಿ ಹೆಚ್ಚು ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ. ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಮಾತ್ರ ಭಾರತ ನೆರವು ನೀಡಿಲ್ಲ, ಜೊತೆಗೆ ಬಾಂಗ್ಲಾ ಅಧ್ಯಕ್ಷ ಶೇಕ್‌ ಮುಜಿಬುರ್‌ ರಹಮಾನ್‌ ಅವರ ಹತ್ಯೆಯ ನಂತರ ಶೇಕ್‌ ಹಸೀನಾ ಮತ್ತು ಸಹೋದರಿಗೆ ಭಾರತ ಆಶ್ರಯ ನೀಡಿತ್ತು.

ಮತ್ತೊಂದೆಡೆ ಬಾಂಗ್ಲಾದೇಶ ಸರ್ಕಾರವನ್ನು ಒಲೈಸಲು ಚೀನಾ ತೀವ್ರವಾಗಿ ಪ್ರಯತ್ನಿಸುತ್ತಿದೆ. ಇವೆಲ್ಲದರ ನಡುವೆ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಭಿಯಾನ ಹೆಚ್ಚು ಪ್ರಭಾವ ಬೀರಿಲ್ಲ ಎಂದು ಚಿತ್ತಗಾಂಗ್‌ ವಿವಿಯ ಮುಂತಸ್ಸಿರ್‌ ಮಾಮೂನ್‌ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಕೆಲವು ಬಾಂಗ್ಲಾದೇಶಿಗಳು “ಮೆಕ್ಸಿಕನ್‌ ಸಿಂಡ್ರೊಮ್‌ ನಿಂದ ಬಳಲುತ್ತಿದ್ದಾರೆ. ಇದು ಕಾಲಕಾಲಕ್ಕೆ ಭಾರತವನ್ನು ಬಹಿಷ್ಕರಿಸಿ, ಇಂಡಿಯಾ ಔಟ್‌ ಅಭಿಯಾನಗಳಿಗೆ ಕಾರಣವಾಗಬಹುದು. ಆದರೆ ಎರಡೂ ದೇಶಗಳ ನಡುವೆ ಐತಿಹಾಸಿಕ ಸಂಬಂಧವಿದೆ ಎಂಬುದನ್ನು ಗಮನಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next