Advertisement

ಐಒಎಯಲ್ಲಿ ಭುಗಿಲೆದ್ದಿದೆ ಬಣಜಗಳ

12:22 AM Aug 29, 2022 | Team Udayavani |

ಹೊಸದಿಲ್ಲಿ: ನರೇಂದ್ರ ಬಾತ್ರಾ ಐಒಎ (ಭಾರತೀಯ ಒಲಿಂಪಿಕ್‌) ಅಧ್ಯಕ್ಷ ಸ್ಥಾನದಿಂದ ಹೊರಹಾಕಲ್ಪಟ್ಟ ಬೆನ್ನಲ್ಲೇ ಅಲ್ಲಿನ ಆಂತರಿಕ ಜಗಳ ತಾರಕ್ಕೇರಿದೆ.

Advertisement

ಇದೀಗ ಹೊಸ ಕಲಹ ಶುರುವಾಗಿದೆ. ಐಒಎ ಉಪಾಧ್ಯಕ್ಷ ಆದಿಲ್‌ ಸುಮರಿವಾಲ, ಐಒಸಿಗೆ (ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ) ಪತ್ರ ಬರೆದಿದ್ದು, ಕಾರ್ಯ ನಿರ್ವಾಹಕ ಮಂಡಳಿ ತನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿರಸ್ಕರಿಸಿದ್ದಾರೆ.

2021ರ ಡಿಸೆಂಬರ್‌ನಿಂದಲೇ ಕಾರ್ಯ ನಿರ್ವಾಹಕ ಮಂಡಳಿ ಅಸ್ತಿತ್ವದಲ್ಲಿಲ್ಲ. ಚುನಾವಣೆ ನಡೆಯದೇ ಇರುವುದರಿಂದ ಅದು ತನ್ನ ಅಧಿಕಾರ ಕಳೆದುಕೊಂಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ಸಣ್ಣ ಸಭೆ ನಡೆಸಲಿಕ್ಕೂ ದಿಲ್ಲಿ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದ ಅನುಮತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಹೀಗಿರುವಾಗ ಕಾರ್ಯ ನಿರ್ವಾಹಕ ಮಂಡಳಿ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲು ಹೇಗೆ ಸಾಧ್ಯ ಎಂದು ಮೆಹ್ತಾ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next