Advertisement

“ಭಾರತೀಯ ಕಲಾಹಿರಿಮೆ ಅವಿಚ್ಛಿನ್ನವಾದುದು’

03:31 PM Mar 09, 2017 | |

ಮಲ್ಪೆ: ಅಭಿವ್ಯಕ್ತಿಯ ವೈಶಿಷ್ಟಗಳಿಸಿದ್ದವರನ್ನು ಸ್ವೀಕಾ ರಾರ್ಹರನ್ನಾಗಿಸುವ ಸತ್ವ ಕಲಾ ಪ್ರಕಾರಗಳಿಗೆ ಇದೆ. ಇದು ಹಳ್ಳಿ, ನಗರವೆನ್ನದೆ ಎಲ್ಲೂ ಸಲ್ಲುತ್ತಿರುವುದು ಸಾಬೀತಾಗಿದೆ ಮತ್ತು ಸ್ವ ಅನುಭವವೂ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ಭಾರತೀಯರ ಸಾಂಸ್ಕೃತಿಕ, ಕಲಾ ಹಿರಿಮೆ ಅವಿಚ್ಛಿನ್ನ ವಾದುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರು ಹೇಳಿದರು.

Advertisement

ಅವರು ಸೋಮವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಇವರ ಅಜ್ಜರಕಾಡು ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಆಯೋಜಿಸಿ ರುವ “ರಂಗಹಬ್ಬ-5’ರ 3ನೇ ದಿನದ ಕಾರ್ಯ ಕ್ರಮದಲ್ಲಿ ಮುಖ್ಯ ಆತಿಥಿ ಯಾಗಿ ಭಾಗವಹಿಸಿ ಮಾತನಾಡಿ ಬದಲಾವಣೆಯ ಕಾಲಘಟ್ಟದಲ್ಲಿ, ಬೆಳ ವಣಿಗೆಗಳೊಡನಿರುವ ಉಡುಪಿಯ ಸಾಂಸ್ಕೃತಿಕ ಪರಂಪರೆಯ ಘನತೆಗೆ ಯೋಗ್ಯವಾದ ರೀತಿಯಲ್ಲಿ ರಂಗಹಬ್ಬ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು ವಹಿಸಿದ್ದರು. ಅತಿಥಿಗಳಾಗಿ ಬ್ಲಾಸಂ ಆಸ್ಕರ್‌ ಫೆರ್ನಾಂಡೀಸ್‌, ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌, ಶಿಕ್ಷಕ ಜಿ.ಪಿ. ಪ್ರಭಾಕರ ತುಮುರಿ, ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್‌ ಪೂಜಾರಿ, ಉದ್ಯಮಿ ಹರೀಶ್‌ ಜಿ. ಕೋಟ್ಯಾನ್‌, ಲೋಕನಾಥ್‌ ಕುಂದರ್‌, ಕಲಾವಿದ ರಾಮ್‌ ಶೆಟ್ಟಿ ಹಾರಾಡಿ ಹಾಗೂ ಸುಮನಸಾದ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ಬಿ.ಕೆ. ಕಾರಂತ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಎಂ.ಎಸ್‌.ಭಟ್‌ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್‌ ಪ್ರಸಾದ್‌ ಸ್ವಾಗತಿಸಿದರು. ಯೋಗೀಶ್‌ ಕೊಳಲಗಿರಿ ಪ್ರಸ್ತಾವನೆ ಗೈದರು. ಅಶೋಕ್‌ ಅಮ್ಮಂಜೆ ವಂದಿಸಿದರು. ಬಳಿಕ ರಸರಂಗ ಕದ್ರಿಕಟ್ಟು ಕೋಟ ಅವರಿಂದ “ಕಲೆಯ ಕೊಲೆ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next