Advertisement

ನಿರ್ಲಕ್ಷಿಸಿದ ವೈದ್ಯಗೆ 39 ಲಕ್ಷ ದಂಡ

12:48 AM Sep 07, 2019 | mahesh |

ದುಬೈ: ವೈದ್ಯರ ನಿರ್ಲಕ್ಷ್ಯದಿಂದ ಮೃತರಾಗಿದ್ದ ಭಾರತೀಯ ಮೂಲದ ಮಹಿಳೆಯ ಪತಿ ಹಾಗೂ ಇಬ್ಬರು ಮಕ್ಕಳಿಗೆ ವೈದ್ಯರು ಮತ್ತು ಆಸ್ಪತ್ರೆ 39.04 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕೆಂದು ಶಾರ್ಜಾದ ನ್ಯಾಯಾಲಯವೊಂದು ಆದೇಶಿಸಿದೆ.

Advertisement

ಕೇರಳದ ಕೊಲ್ಲಂ ಜಿಲ್ಲೆಯವರಾದ ಬ್ಲೆಸ್ಸಿ ಟಾಂ ಎಂಬ ಮಹಿಳೆ ಶಾರ್ಜಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಂಕಿನ ಕಾರಣ ಅವರು ಇಲ್ಲಿಯ ಡಾ. ಸನ್ನಿ ಮೆಡಿಕಲ್ ಸೆಂಟರ್‌ ಆಸ್ಪತ್ರೆಯ ಭಾರತೀಯ ಮೂಲದ ವೈದ್ಯ ದರ್ಶನ್‌ ಪ್ರಭಾತ್‌ ರಾಜನ್‌ ಬಳಿ ಚಿಕಿತ್ಸೆಗೆ ಆಗಮಿಸಿದ್ದರು. ರಾಜನ್‌ ಪರೀಕ್ಷೆ ನಡೆಸದೇ ಆ್ಯಂಟಿ ಬಯೋಟಿಕ್‌ ಚುಚ್ಚು ಮದ್ದು ನೀಡಿದ್ದರು. ಅದು ವ್ಯತಿರಿಕ್ತ ಪರಿಣಾಮ ಬೀರಿ ಬ್ಲೆಸ್ಲಿ ಮೃತಪಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next