Advertisement

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

04:48 PM Sep 27, 2022 | Team Udayavani |

ಗುವಾಹಟಿ: ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯು ಕಾಶ್ಮೀರ ತಲುಪುವ ವೇಳೆಗೆ ಭಾರತವು ಕಾಂಗ್ರೆಸ್ ಮುಕ್ತವಾಗಿರಲಿದೆ ಎಂದು ಅಸ್ಸಾಂ ಬಿಜೆಪಿ ಸಚಿವ ಪಿಜುಶ್ ಹಜಾರಿಕ ವ್ಯಂಗ್ಯವಾಡಿದರು.

Advertisement

ಅಸ್ಸಾಂನ ಧುಬ್ರಿ ಜಿಲ್ಲೆಯ ರಾಜೀವ್ ಭವನದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವಿನ ಘರ್ಷಣೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು.

“ರಾಹುಲ್ ಗಾಂಧಿ ಅವರು ಕಾಶ್ಮೀರ ತಲುಪುವ ವೇಳೆ ಭಾರತವು ಕಾಂಗ್ರೆಸ್ ಮುಕ್ತವಾಗಬಹುದು” ಎಂದರು.

ಇದನ್ನೂ ಓದಿ:2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

ಅಸ್ಸಾಂನ ಧುಬ್ರಿ ಜಿಲ್ಲೆಯ ರಾಜೀವ್ ಭವನದಲ್ಲಿ ಭಾರತ್ ಜೋಡೋ ಯಾತ್ರೆ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ದಿನದ ಬಳಿಕ ಹಜಾರಿಕ ಈ ರೀತಿ ವ್ಯಂಗ್ಯವಾಡಿದರು.

Advertisement

ಅಸ್ಸಾಂ ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರ ಮುಂಭಾಗದಲ್ಲಿ ಈ ಗಲಾಟೆ ನಡೆದಿದೆ. ಭಾರತ್ ಜೋಡೊ ಯಾತ್ರೆಯು ನವೆಂಬರ್ 1ರಂದು ಅಸ್ಸಾಂಗೆ ಕಾಲಿರಲಿದೆ. ಈ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಗಲಾಟೆಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next