Advertisement

ಶಾಂತಿ ಬೇಕಿದ್ದರೆ ಪಾಕ್‌ ಉಗ್ರರ ರವಾನೆ ನಿಲ್ಲಿಸಬೇಕು: ಜ|ರಾವತ್‌

04:11 PM May 25, 2018 | Team Udayavani |

ಪೆಹಲ್‌ಗಾಂವ್‌ , ಜಮ್ಮು ಕಾಶ್ಮೀರ : ‘ಭಾರತ ಶಾಂತಿ ಬಯಸುತ್ತದೆ, ಆದರೆ ಪಾಕಿಸ್ಥಾನ ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ರವಾನಿಸುವುದನ್ನು ನಿಲ್ಲಿಸಬೇಕು’ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಖಡಕ್‌ ಆಗಿ ಹೇಳಿದ್ದಾರೆ. 

Advertisement

ಪವಿತ್ರ ಉಪವಾಸದ ರಮ್ಜಾನ್‌ ಮಾಸದ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ  ಭಾರತೀಯ ಪಡೆಗಳು ಸೇನಾ ಕಾರ್ಯಾಚರಣೆ ನಿಲ್ಲಿಸಿವೆ; ಇದನ್ನು ರಮ್ಜಾನ್‌ ಬಳಿಕವೂ ಮುಂದುವರಿಸುವ ಆಲೋಚನೆ ಇದೆ; ಆದರೆ ಪಾಕ್‌ ಉಗ್ರರು ಯಾವುದೇ ದುಸ್ಸಾಹಸ ನಡೆಸಿದರೆ ನಮ್ಮ ಆಲೋಚನೆಯನ್ನು ನಾವು ಬದಲಿಸಬೇಕಾಗುತ್ತದೆ ಎಂದು ಜನರಲ್‌ ರಾವತ್‌ ಹೇಳಿದರು. 

‘ಪಾಕಿಸ್ಥಾನಕ್ಕೆ ಭಾರತದೊಂದಿಗೆ ಶಾಂತಿಯಿಂದಿರಲು ಆಸಕ್ತಿ ಇದ್ದರೆ ಅದು ಎಲ್ಲಕ್ಕಿಂತ  ಮೊದಲು ಜಮ್ಮು ಕಾಶ್ಮೀರಕ್ಕೆ  ತನ್ನಲ್ಲಿನ ಉಗ್ರರನ್ನು ಕಳುಹಿಸುವುದನ್ನು ನಿಲ್ಲಿಸಬೇಕು’ ಎಂದು ಜನರಲ್‌ ರಾವತ್‌ ಹೇಳಿದರು.

‘ಗಡಿಯಲ್ಲಿ ಶಾಂತಿ ಏರ್ಪಡುವುದನ್ನು ಭಾರತ ಬಯಸುತ್ತದೆ; ಆದರೆ ಪಾಕಿಸ್ಥಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆಗೈದು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ; ಇದರಿಂದಾಗಿ ಜೀವ ಮತ್ತು ಸೊತ್ತು ಹಾನಿ ನಿರಂತರವಾಗಿ ಸಾಗಿದೆ; ಇದು ನಿಲ್ಲದೇ ಗಡಿಯಲ್ಲಿ ಶಾಂತಿ ಏರ್ಪಡಲು ಸಾಧ್ಯವಿಲ್ಲ’ ಎಂದು ಜನರಲ್‌ ರಾವತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next