Advertisement

ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್‌ ಪದಾರ್ಪಣೆ

11:26 PM Jun 26, 2022 | Team Udayavani |

ಡಬ್ಲಿನ್‌: ಭಾರತ-ಐರ್ಲೆಂಡ್‌ ನಡುವಿನ ಟಿ20 ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಟಾಸ್‌ ಬಳಿಕ ಸುರಿದ ಮಳೆಯಿಂದಾಗಿ ಪಂದ್ಯದ ಆರಂಭ ವಿಳಂಬಗೊಂಡಿದೆ.

Advertisement

ಇದು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮೊದಲ ಪಂದ್ಯವಾಗಿದ್ದು, ಟಾಸ್‌ ಗೆದ್ದ ಅವರು ಐರ್ಲೆಂಡನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಈ ನಡುವೆ ವೇಗಿ ಉಮ್ರಾನ್‌ ಮಲಿಕ್‌ ಭಾರತದ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಪಡೆದರು. ಅವರಿಗೆ ತಂಡದ ಹಿರಿಯ ಬೌಲರ್‌ ಭುವನೇಶ್ವರ್‌ ಕುಮಾರ್‌ ಕ್ಯಾಪ್‌ ನೀಡಿ ಸ್ವಾಗತಿಸಿದರು. ಹರ್ಷಲ್‌ ಪಟೇಲ್‌ ಸ್ಥಾನ ಮಲಿಕ್‌ ಪಾಲಾಯಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಬದಲು ದೀಪಕ್‌ ಹೂಡಾ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಿಗೆ ಸ್ಥಾನ ಲಭಿಸಿತು.

ಐರ್ಲೆಂಡ್‌ ಪರ ಕಾನರ್‌ ಓಲ್ಫರ್ಟ್‌ ಟಿ20 ಪದಾರ್ಪಣೆಗೈದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next