Advertisement

ಸ್ವಾಯತ್ತೆಗಾಗಿ ಭಾರತ ಎಲ್ಲ ಶಕ್ತಿಯನ್ನೂ ಬಳಸುತ್ತೆ

01:00 AM Mar 05, 2019 | Team Udayavani |

ಕೊಯಮತ್ತೂರು: ಪುಲ್ವಾಮಾ ದಾಳಿಗೆ ಪ್ರತಿ ಯಾಗಿ ಪಾಕಿಸ್ಥಾನದಲ್ಲಿ ಉಗ್ರ ನೆಲೆಗಳ ಮೇಲೆ ವಾಯುಪಡೆ ನಡೆಸಿದ ದಾಳಿಯನ್ನು ಪರೋಕ್ಷವಾಗಿ ಉಲ್ಲೇಖೀಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ದೇಶದ ಸ್ವಾಯತ್ತೆಗಾಗಿ ಭಾರತ ತನ್ನ ಎಲ್ಲ ಶಕ್ತಿಯನ್ನೂ ಬಳಸುತ್ತದೆ ಎಂದಿದ್ದಾರೆ. ಅಂತಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರ ವದ ಜತೆಗೆ ಸೇನೆಯ ಸಾಮರ್ಥ್ಯವೂ ಹೆಚ್ಚುತ್ತಿದೆ. ಭಾರತವು ಶಾಂತಿ ಕಾಪಾಡಲು ಬದ್ಧವಾಗಿದೆ. ಆದರೆ ಅಗತ್ಯ ಬಿದ್ದರೆ, ನಮ್ಮ ಸ್ವಾಯತ್ತೆಯನ್ನು ರಕ್ಷಿಸಲು ನಾವು ಎಲ್ಲ ಶಕ್ತಿ ಯನ್ನೂ ಬಳಸಿಕೊಳ್ಳುತ್ತೇವೆ. ದಾಳಿ ನಡೆಸಿದ ವೇಳೆ ನಮ್ಮ ಸಶಸ್ತ್ರ ಬಲದ ಸಾಮರ್ಥ್ಯ ಸಾಬೀತಾಗಿದೆ. ಕೊಯಮ ತ್ತೂರಿನ ವಾಯು ನೆಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next