Advertisement

ಸದ್ಭಾವನಾ ಸಂಕೇತವಾಗಿ ಪಾಕ್‌ಗೆ ವೃದ್ಧನ ಹಸ್ತಾಂತರಿಸಿದ ಬಿಎಸ್‌ಎಫ್

03:40 PM Mar 09, 2019 | |

ಶ್ರೀನಗರ : ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಇರುವ ವೇಳೆಯಲ್ಲೇ ಸಾಂಬಾ ವಲಯದಲ್ಲಿ  ಅಂತರಾಷ್ಟ್ರೀಯ ಗಡಿ ದಾಟಿ ಬಂದ ವೃದ್ಧನೊಬ್ಬನನ್ನು  ಸದ್ಭಾವನಾ ಸಂಕೇತವಾಗಿ ಒಂದೇ ದಿನದಲ್ಲಿ ಬಿಎಸ್‌ಎಫ್ ಹಸ್ತಾಂತರಿಸಿದೆ. 

Advertisement

ಶುಕ್ರವಾರ ಗಡಿ ದಾಟಿ ಬಂದಿದ್ದ 60 ರ ಹರೆಯದ ಮೊಹಮದ್‌ ಅಶ್ರಫ್ ಎನ್ನುವ ವೃದ್ಧನ್ನನ್ನು ಬಿಎಸ್‌ಎಫ್ ಪಡೆಗಳು ವಶಕ್ಕೆ ಪಡೆದಿದ್ದವು. ಈ ವೇಳೆ ಆತನ ಬಳಿ 12,000 ರೂಪಾಯಿ ಮೌಲ್ಯದ ಪಾಕ್‌  ಹಣವನ್ನು ವಶಕ್ಕೆ ಪಡೆಯಲಾಗಿತ್ತು. 

ಮೊಹಮದ್‌ ಅಶ್ರಫ್ ಪಾಕ್‌ನ ಪಂಜಾಬ್‌ನ ಬೊಯ್ಟಾ -ನರ್‌ವಾಲ್‌ ಪ್ರಾಂತ್ಯದ ನಿವಾಸಿ ಎಂದು ತಿಳಿದು ಬಂದಿದೆ. 

ಶನಿವಾರ ಮಧ್ಯಾಹ್ನ 3.40 ರ ವೇಳೆಗೆ ಬಿಎಸ್‌ಎಫ್ ಮೊಹಮದ್‌ ಅಶ್ರಫ್ನನ್ನು ಪಾಕ್‌ ರೇಂಜರ್‌ಗಳಿಗೆ ಹಸ್ತಾಂತರಿಸಿದ್ದಾರೆ. ಭಾರತೀಯ ಪಡೆಗಳ ಮಾನವೀಯತೆಯನ್ನು ಪಾಕ್‌ ರೇಂಜರ್‌ಗಳು ಕೊಂಡಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next