Advertisement

ಚೀನ ಬೇಹುಗಾರಿಕೆ: ಕ್ಷಿಪಣಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ

11:54 PM Nov 05, 2022 | Team Udayavani |

ಹೊಸದಿಲ್ಲಿ: ಚೀನದ ಬೇಹುಗಾರಿಕ ನೌಕೆಯೊಂದು ಹಿಂದೂ ಮಹಾಸಾಗರವನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಭಾರತವು ಬಂಗಾಲ ಕೊಲ್ಲಿಯಲ್ಲಿ ನಡೆಸಲುದ್ದೇಶಿಸಿರುವ ಕ್ಷಿಪಣಿ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಯಿದೆ.

Advertisement

ಮುಂದಿನ ವಾರ ಮಹತ್ವದ ಅಗ್ನಿ ಸರಣಿಯ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಲು ಭಾರತ ಸಜ್ಜಾಗಿತ್ತು. ಆದರೆ ಚೀನದ ಗೂಢಚಾರಿ ಹಡಗು ಈ ಕ್ಷಿಪಣಿಯ ಮೇಲೆ ಕಣ್ಣಿಟ್ಟಿರುವುದರಿಂದ ಕ್ಷಿಪಣಿ ಪರೀಕ್ಷೆಯನ್ನೇ ಮುಂದೂಡಿಕೆ ಮಾಡುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನದ 22 ಸಾವಿರ ಟನ್‌ ತೂಕದ ಯುವಾನ್‌ ವಾಂಗ್‌-6 ಬೇಹುಗಾರಿಕ ನೌಕೆಗೆ ಖಂಡಾಂತರ ಕ್ಷಿಪಣಿಗಳ ವೇಗ, ನಿಖರತೆ ಮತ್ತು ವ್ಯಾಪ್ತಿಯನ್ನು ಟ್ರ್ಯಾಕ್‌ ಮಾಡುವಂಥ ಸಾಮರ್ಥ್ಯವಿದೆ.

ಭಾರತದ ಉಪಗ್ರಹಗಳು ಮತ್ತು ಕ್ಷಿಪಣಿಗಳ ತಾಂತ್ರಿಕ ಗುಪ್ತಚರ ನಡೆಸಲೆಂದೇ ಚೀನವು ಈ ನೌಕೆಯನ್ನು ಕಳುಹಿಸಿರುವ ಸಾಧ್ಯತೆ ಯಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next