Advertisement

ಅಲ್ಖೈದಾಗೆ ಭಾರತ ಹೆದರಬೇಕಿಲ್ಲ

01:47 AM Jul 12, 2019 | mahesh |

ನವದೆಹಲಿ: ಭಾರತ ಸರ್ಕಾರ ಮತ್ತು ಸೇನೆಯ ಮೇಲೆ ದಾಳಿ ನಡೆಸುವಂತೆ ಅಲ್ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಯ್ಮನ್‌ ಅಲ್ ಜವಾಹಿರಿ ಹೇಳಿಕೆಯ ಬಗ್ಗೆ ಭಾರತ ಹೆದರಬೇಕಿಲ್ಲ. ನಮ್ಮ ಭದ್ರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.

Advertisement

ಅಲ್ಖೈದಾ ಒಂದು ವಿಶ್ವಸಂಸ್ಥೆಯೇ ಘೋಷಿಸಿದ ಉಗ್ರ ಸಂಘಟನೆ ಮತ್ತು ಅದರ ಮುಖ್ಯಸ್ಥನನ್ನೂ ವಿಶ್ವಸಂಸ್ಥೆ ಉಗ್ರ ಎಂದು ಘೋಷಿಸಿದೆ. ದೇಶವನ್ನು ರಕ್ಷಿಸಲು ಭಾರತೀಯ ಸೇನೆ ಸಮರ್ಥವಾಗಿದೆ. ಹೀಗಾಗಿ ಹೆದರುವ ಅಗತ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಇನ್ನು ಸಿಖ್‌ ಫಾರ್‌ ಜಸ್ಟಿಸ್‌ ಎಂಬ ಖಲಿಸ್ತಾನಿ ಪರ ಸಂಘಟನೆಯನ್ನು ನಿಷೇಧಿಸಿರುವ ಕುರಿತು ಮಾತನಾಡಿದ ರವೀಶ್‌ ಕುಮಾರ್‌, ಈ ಸಂಘಟನೆಯು ದೇಶ ವಿರೋಧಿ ನೀತಿ ಹೊಂದಿದೆ. ಹೀಗಾಗಿ ನಿಷೇಧಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next