Advertisement

ಭಾರತದಿಂದ ಅರುಣಾಚಲ ಜನರಿಗೆ ಅನ್ಯಾಯ: ಚೀನಾ

03:50 AM Apr 13, 2017 | Team Udayavani |

ಬೀಜಿಂಗ್‌: ಭಾರತದ ಅಕ್ರಮ ಆಡಳಿತದಿಂದ ಅರುಣಾಚಲ ಪ್ರದೇಶದ ಜನರಿಗೆ ಬದುಕು ಕಷ್ಟಕರವಾಗಿದ್ದು, ಅಸಮಾಧಾನ ಗೊಂಡಿದ್ದಾರೆ. ಜೊತೆಗೆ ಚೀನಾದತ್ತ ನೋಡುತ್ತಿದ್ದಾರೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ಬರೆದಿದೆ. ಅಲ್ಲದೇ ಅರುಣಾಚಲ ಪ್ರದೇಶಕ್ಕೆ ಬೌದ್ಧಗುರು ದಲೈಲಾಮಾ ಅವರ ಭೇಟಿಗೆ ಅವಕಾಶ ಮಾಡಿಕೊಟ್ಟ ಭಾರತ ಸರ್ಕಾರವನ್ನೂ ಅದು ಟೀಕಿಸಿದೆ. ಅರುಣಾಚಲ ಪ್ರದೇಶದ ಜನರು ಭಾರತದ ವಿವಿಧ ರೀತಿಯ ಭೇದಭಾವದ ಆಡಳಿತದಿಂದ ರೋಸಿಹೋಗಿದ್ದಾರೆ ಎಂದಿದೆ. ಅಲ್ಲದೇ ದಲೈಲಾಮಾ ಅವರ ತವಾಂಗ್‌ ಭೇಟಿಯಿಂದಾಗಿ ಪ್ರಾದೇಶಿಕ ಶಾಂತಿಗೆ ಅಡ್ಡಿಯಾಗಿದೆ ಎಂದು ಹಳಿದಿದೆ.

Advertisement

ಋಣಾತ್ಮಕ ಪರಿಣಾಮ: ದಲೈಲಾಮಾ ಭೇಟಿಯಿಂದ ಭಾರತ-ಚೀನಾ ಗಡಿವಿ ವಾದದ ಮೇಲೆ ಋಣಾತ್ಮಕ ಪರಿಣಾಮವಾಗಿದೆ. ಟಿಬೆಟ್‌ ವಿಚಾರದಲ್ಲಿ ಭಾರತ ತನ್ನ ಬದ್ಧತೆಯನ್ನು ಉಲ್ಲಂ ಸಿದೆ ಎಂದೂ ಚೀನಾ ದೂರಿದೆ. ಈ ಬಗ್ಗೆ ಹೇಳಿಕೆ ನೀಡಿದ ಚೀನಾ ನಮ್ಮ ಗಡಿ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಅದು ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next