Advertisement

ಪಾಕ್‌ ವಿರುದ್ಧ ವಿತ್ತ ವಾರ್‌

12:30 AM Feb 17, 2019 | |

ಹೊಸದಿಲ್ಲಿ: ಯೋಧರ ಮೇಲಿನ ಉಗ್ರರ ದಾಳಿ ಬಳಿಕ ಪಾಕ್‌ ವಿರುದ್ಧ ಭಾಗಶಃ ಸಿಡಿದೆದ್ದಿರುವ ಭಾರತ, “ಆರ್ಥಿಕ ಸಮರ’ವನ್ನೇ ಘೋಷಿಸಿದೆ. ಕೇಂದ್ರವು ಈಗ ಆ ದೇಶದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಳ ಮಾಡಿ ದೊಡ್ಡ ಆಘಾತವನ್ನೇ ನೀಡಿದೆ. ತತ್‌ಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. 2017-18ರಲ್ಲಿ ಪಾಕಿಸ್ಥಾನದಿಂದ 3,482 ಕೋಟಿ ರೂ. ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
 
ಎಫ್ಎಟಿಎಫ್ಗೂ ದಾಖಲೆ
ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘ ಟನೆಯೊಂದಿಗೆ ಪಾಕಿಸ್ಥಾನ ಹೊಂದಿರುವ ಸಂಬಂಧಗಳ ದಾಖಲೆ ಗಳನ್ನು ಭಾರತವು ಪ್ಯಾರಿಸ್‌ನಲ್ಲಿರುವ ಆರ್ಥಿಕ ಕಾರ್ಯಸಾಧು ಪಡೆ (ಎಫ್ಎಟಿಎಫ್)ಗೆ ನೀಡಲಿದೆ. ಒಂದು ವೇಳೆ ಭಾರತದ ಈ ದಾಖಲೆಗಳನ್ನು ಒಪ್ಪಿ ಪಾಕ್‌ ಅನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದಲ್ಲಿ ಐಎಂಎಫ್, ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮತ್ತು ಐರೋಪ್ಯ ಒಕ್ಕೂಟದಿಂದ ಹಣ ಬರುವುದು ನಿಲ್ಲುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next