ಹೊಸದಿಲ್ಲಿ: ಯೋಧರ ಮೇಲಿನ ಉಗ್ರರ ದಾಳಿ ಬಳಿಕ ಪಾಕ್ ವಿರುದ್ಧ ಭಾಗಶಃ ಸಿಡಿದೆದ್ದಿರುವ ಭಾರತ, “ಆರ್ಥಿಕ ಸಮರ’ವನ್ನೇ ಘೋಷಿಸಿದೆ. ಕೇಂದ್ರವು ಈಗ ಆ ದೇಶದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಳ ಮಾಡಿ ದೊಡ್ಡ ಆಘಾತವನ್ನೇ ನೀಡಿದೆ. ತತ್ಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 2017-18ರಲ್ಲಿ ಪಾಕಿಸ್ಥಾನದಿಂದ 3,482 ಕೋಟಿ ರೂ. ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
ಎಫ್ಎಟಿಎಫ್ಗೂ ದಾಖಲೆ
ಜೈಶ್-ಎ-ಮೊಹಮ್ಮದ್ ಉಗ್ರ ಸಂಘ ಟನೆಯೊಂದಿಗೆ ಪಾಕಿಸ್ಥಾನ ಹೊಂದಿರುವ ಸಂಬಂಧಗಳ ದಾಖಲೆ ಗಳನ್ನು ಭಾರತವು ಪ್ಯಾರಿಸ್ನಲ್ಲಿರುವ ಆರ್ಥಿಕ ಕಾರ್ಯಸಾಧು ಪಡೆ (ಎಫ್ಎಟಿಎಫ್)ಗೆ ನೀಡಲಿದೆ. ಒಂದು ವೇಳೆ ಭಾರತದ ಈ ದಾಖಲೆಗಳನ್ನು ಒಪ್ಪಿ ಪಾಕ್ ಅನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದಲ್ಲಿ ಐಎಂಎಫ್, ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ಐರೋಪ್ಯ ಒಕ್ಕೂಟದಿಂದ ಹಣ ಬರುವುದು ನಿಲ್ಲುತ್ತದೆ.