Advertisement

ಭಾರತದ ವಿರುದ್ಧ ಸಾಕ್ಷ್ಯಗಳು ಪಾಕ್‌ನ ಕಟ್ಟುಕತೆ: ಅನುರಾಗ್ ಶ್ರೀವಾಸ್ತವ

09:45 PM Nov 15, 2020 | sudhir |

ನವದೆಹಲಿ: “ತನ್ನ ನೆಲದಲ್ಲಿ ಭಾರತ ಉಗ್ರ ಚಟುವಟಿಕೆ ನಡೆಸುತ್ತಿದೆ. ಈ ಬಗ್ಗೆ ಸಾಕ್ಷ್ಯಗಳನ್ನೂ ಒದಗಿಸಬಲ್ಲೆವು’ ಎಂಬ ಪಾಕಿಸ್ತಾನದ ತಲೆಬುಡವಿಲ್ಲದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್‌ ಶ್ರೀವಾಸ್ತವ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ.

Advertisement

“ಸಾಕ್ಷ್ಯಗಳು ಎನ್ನುವುದು ಪಾಕ್‌ನ ಕಟ್ಟುಕತೆ’ ಎಂದು ವ್ಯಾಖ್ಯಾನಿಸಿದ್ದಾರೆ. “ಇದು ವಿಶ್ವ ಸಮುದಾಯದ ಮುಂದೆ ಪಾಕ್‌ನ ಮತ್ತೂಂದು ಹತಾಶ ಮತ್ತು ವ್ಯರ್ಥ ಪ್ರಯತ್ನ. ಪಾಕ್‌ನ ಉಗ್ರ ತಂತ್ರಗಳನ್ನು ಜಗತ್ತು ಬಲ್ಲದು. ಇಸ್ಲಾಮಾಬಾದ್‌ನ ಉಗ್ರ ಪೋಷಣೆಯನ್ನು ಸ್ವತಃ ಅವರ ನಾಯಕತ್ವವೇ ಒಪ್ಪಿಕೊಂಡಿದೆ’ ಎಂದಿದ್ದಾರೆ.

“ಜಾಗತಿಕ ಉಗ್ರ ಒಸಾಮಾ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದು ಸ್ವತಃ ಪಾಕ್‌ ಕರೆದುಕೊಂಡಿದೆ. ಪುಲ್ವಾಮಾ ದಾಳಿಯನ್ನು ಪಾಕ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬಹಳ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ. ಉಗ್ರರನ್ನು ಯಾರು ಪೋಷಿಸುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಗಳು ಬೇಕೆ?’ ಎಂದು ಶ್ರೀವಾಸ್ತವ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next