Advertisement

ಅಕ್ಕಿ, ಗೋಧಿ ರಫ್ತು ನಿಷೇಧ: ನಿರ್ಧಾರವನ್ನು ಸಮರ್ಥಿಸಿಕೊಂಡ ಸರ್ಕಾರ

12:48 PM Sep 23, 2022 | Team Udayavani |

ನವದೆಹಲಿ: ಅಕ್ಕಿ ಮತ್ತು ಗೋಧಿಯನ್ನು ರಫ್ತು ಮಾಡುವುದನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತ, ಡಬ್ಲೂéಟಿಒ ಸಭೆಯಲ್ಲಿ ಸಮರ್ಥಿಸಿಕೊಂಡಿದೆ.

Advertisement

ರಫ್ತು ಪ್ರಮಾಣ ಹೆಚ್ಚಾಗಿ, ಪ್ರಾದೇಶಿಕ ಮಾರುಕಟ್ಟೆಯಲ್ಲಿ ಕೊರತೆ ಉಂಟಾದ ಹಿನ್ನೆಲೆಯಲ್ಲೇ ನಾವು ರಫ್ತು ನಿಷೇಧ ಮಾಡಿದ್ದೇವೆ. ಇದು ತಾತ್ಕಾಲಿಕ ನಿರ್ಧಾರ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಮಸ್ಯೆ ಬಗೆಹರಿದರೆ ರಫ್ತು ಪುನರಾರಂಭ ಮಾಡುತ್ತೇವೆ ಎಂದು ಭಾರತ ಹೇಳಿದೆ.

ಭಾರತದ  ನಿಲುವಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಅಮೆರಿಕ, ಜಿನಿವಾ, ಸೆನೆಗಲ್‌ ಮತ್ತು ಯುರೋಪಿಯನ್‌ ಒಕ್ಕೂಟ ಕಳವಳ ವ್ಯಕ್ತಪಡಿಸಿದೆಯಾದರೂ, ಭಾರತ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಮೇ ತಿಂಗಳಲ್ಲಿ ಭಾರತ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತು. ನುಚ್ಚು ಅಕ್ಕಿಯ ರಫ್ತಿನ ಮೇಲೂ ಈ ತಿಂಗಳು ನಿಷೇಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next