Advertisement

ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ನಿರ್ಗಮನ

10:55 PM May 15, 2023 | Team Udayavani |

ಸುಝೋವ್‌: ಸತತ ಎರಡು ಸೋಲುಂಡ ಭಾರತ “ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿ ಯಿಂದ ಹೊರಬಿದ್ದಿದೆ. “ಸಿ’ ವಿಭಾಗದ ಮೊದಲ ಸುತ್ತಿನಲ್ಲಿ ಚೈನೀಸ್‌ ತೈಪೆಗೆ 4-1ರಿಂದ ಸೋತಿದ್ದ ಭಾರತ, ಸೋಮವಾರ ಮಲೇಷ್ಯಾಕ್ಕೆ 5-0 ಅಂತರದಿಂದ ಶರಣಾಯಿತು.

Advertisement

ಮಲೇಷ್ಯಾ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳಲ್ಲೂ ಭಾರತ ಆಘಾತಕಾರಿ ಸೋಲನುಭವಿಸಿತು. ಮೊದಲು ಧ್ರುವ ಕಪಿಲ-ಅಶ್ವಿ‌ನಿ ಪೊನ್ನಪ್ಪ, ಬಳಿಕ ಕೆ. ಶ್ರೀಕಾಂತ್‌, ಪಿ.ವಿ. ಸಿಂಧು, ಅನಂತರ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ, ಕೊನೆಯಲ್ಲಿ ಟ್ರೀಸಾ ಜಾಲಿ -ಗಾಯತ್ರಿ ಗೋಪಿಚಂದ್‌ ಎಡವಿ ಬಿದ್ದರು. ಈ ಭರ್ಜರಿ ಗೆಲುವಿನೊಂದಿಗೆ ಮಲೇಷ್ಯಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಚೈನೀಸ್‌ ತೈಪೆ ವಿರುದ್ಧ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಜಯಿಸಿದ್ದೊಂದೇ ಭಾರತದ ಈವರೆಗಿನ ಸಾಧನೆ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next