Advertisement

ಪಾಕ್‌ ಪಠ್ಯದಲ್ಲಿ ಭಾರತ, ಹಿಂದೂ ವಿರೋಧಿ ವಿಷ !

09:16 PM Mar 09, 2023 | Team Udayavani |

ಇಸ್ಲಾಮಾಬಾದ್‌: ಭಯೋತ್ಪಾದನೆ, ಕುತಂತ್ರ, ಪಿತೂರಿಗಳಿಂದ ಸದಾ ಭಾರತದ ವಿರುದ್ಧ ವಿಷಕಾರುವ ನೆರೆಯ ಪಾಕಿಸ್ತಾನದ ಇನ್ನೊಂದು ಮುಖ ಬಯಲಾಗಿದೆ. ಅದು ತನ್ನ ಪಠ್ಯಪುಸ್ತಕಗಳಲ್ಲಿ ಮಹಾತ್ಮಾ ಗಾಂಧೀಜಿ ವಿರುದ್ಧವೂ ಸುಳ್ಳು ಮಾಹಿತಿಗಳನ್ನು ನೀಡಿದೆ. ಈ ಮೂಲಕ ಮಕ್ಕಳ ಮನಸ್ಸಿನಲ್ಲೂ ಭಾರತ ಹಾಗೂ ಹಿಂದೂಗಳ ವಿರುದ್ಧ ವಿಷಬೀಜ ಬಿತ್ತಲು ಮುಂದಾಗಿದೆ. ಈ ಮಾಹಿತಿ ನ್ಯೂಸ್‌ 18 ವರದಿಯೊಂದರಲ್ಲಿ ಪ್ರಕಟವಾಗಿದೆ.

Advertisement

ಅಲ್ಲಿನ ನ್ಯಾಷನಲ್‌ ಬುಕ್‌ ಫೆಡರೇಶನ್‌ ಪ್ರಕಟಿಸಿರುವ ಪಾಕ್‌ನ 8 ಮತ್ತು 9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ ಕೇವಲ ಒಬ್ಬ ಹಿಂದೂ ಹಿತಾಸಕ್ತಿಯಿದ್ದ ನಾಯಕ ಮಾತ್ರ, ಅವರಿಗೆ ಮುಸ್ಲಿಮರ ಮೇಲೆ ಕಾಳಜಿಯಿರಲಿಲ್ಲ ಎಂದು ವರ್ಣಿಸಲಾಗಿದೆ. ಅಲ್ಲದೇ ಕಾಂಗ್ರೆಸ್‌ ಪಕ್ಷದ ನೇತೃತ್ವವನ್ನು ಗಾಂಧಿ ಮತ್ತು ಅವರ ಬೆಂಬಲಿಗರು ಹಿಡಿದ ನಂತರ ಹಿಂದೂಪರ ನಿಲುವನ್ನೇ ಹೆಚ್ಚಾಗಿ ಹೊಂದಿದ್ದರು. ಮುಸ್ಲಿಮರ ಹಕ್ಕುಗಳ ಬಗ್ಗೆ ಗೌರವವಿರಲಿಲ್ಲ. ಇದರಿಂದ ದ್ವೇಷ, ಅಸೂಯೆ, ಸಣ್ಣತನಗಳು ಶುರುವಾದವು ಎಂದು ಪಠ್ಯದಲ್ಲಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಯ ಬಗ್ಗೆ ಇರುವ 8ನೇ ತರಗತಿ ಪಠ್ಯದಲ್ಲಿ, ಹಲವರು ಭಾರತ ರಾಷ್ಟ್ರೀಯವಾದವನ್ನು ಬೆಂಬಲಿಸಲು ಕಾಂಗ್ರೆಸ್‌ ಸೇರಿದರು. ಅದು ಮುಖ್ಯವಾಗಿ ಹಿಂದೂ ಧರ್ಮವನ್ನೇ ಆದ್ಯತೆಯಾಗಿಟ್ಟುಕೊಂಡಿತ್ತು. ಆದ್ದರಿಂದ ಕಾಂಗ್ರೆಸ್‌ ಇಡೀ ಭಾರತದ ರಾಷ್ಟ್ರೀಯ ಧ್ವನಿಯಾಗುವುದರ ಬದಲು, ಬಹುತೇಕ ಹಿಂದೂ ಪರ ಪಕ್ಷವಾಗಿತ್ತು ಎಂದು ಹೇಳಲಾಗಿದೆ. ಒಟ್ಟಾರೆ ಹಲವು ಅಂತೆಕಂತೆಗಳನ್ನು ಪಠ್ಯದಲ್ಲಿ ತುಂಬಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next