Advertisement

ಇಂಡಿ ಪಕ್ಷೇತರ ಸಾಹುಕಾರನ ಬಂಧನ;ಲಾಠಿ ಚಾರ್ಜ್‌,ಆತ್ಮಹತ್ಯೆ ಯತ್ನ! 

01:53 PM Apr 11, 2018 | |

ವಿಜಯಪುರ:ಇಂಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ, ಅಕ್ರಮ ಮರಳು ದಂಧೆಯಲ್ಲಿ ಬಂಧನಕ್ಕೊಳಗಾಗಿರುವ  ಮಹಾದೇವ ಸಾಹುಕಾರ ಭೈರಗೊಂಡನನ್ನು ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರು ಪಡಿಸಿದರು. ಈ ವೇಳೆ ಹಲವು ಬೆಂಬಲಿಗರು ಕೋರ್ಟ್‌ ಆವರಣದಲ್ಲಿ ಜಮಾವಣೆಗೊಂಡಿದ್ದರು, ಪೊಲೀಸರು ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರವನ್ನೂ ನಡೆಸಿದರು. 

Advertisement

ಭೈರಗೊಂಡ ಕೋರ್ಟ್‌ ಒಳಗೆ ತೆರಳುತ್ತಿದ್ದಂತೆ ಬೆಂಬಲಿಗನೊಬ್ಬ ಡಿಸೇಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಸ್ಥಳದಲ್ಲಿದ್ದವರು ತಡೆದಿದ್ದಾರೆ. ನೂರಾರು ಬೆಂಬಲಿಗರು ಪೊಲೀಸ್‌ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಇಂಡಿಯಲ್ಲಿ 100ಕ್ಕೂ ಹೆಚ್ಚು ಅಕ್ರಮ ಮರಳನ್ನು ವಶಪಡೆದುಕೊಳ್ಳಲಾಗಿತ್ತು. ಆ ಸಂಬಂಧ ಭೈರಗೊಂಡ ವಿರುದ್ಧ ರೌಡಿ ಶೀಟರ್‌ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 

ಭೈರಗೊಂಡನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next