Advertisement

ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟಿ20 ಪಂದ್ಯ ರದ್ದು: ವೀಕ್ಷಕರಿಗೆ ಅರ್ಧ ಮೊತ್ತ ವಾಪಸ್‌

06:02 PM Jun 20, 2022 | Team Udayavani |

ಬೆಂಗಳೂರು: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯದ ವೀಕ್ಷಕರಿಗೆ ಅರ್ಧದಷ್ಟು ಟಿಕೆಟ್‌ ಮೊತ್ತವನ್ನು ಮರಳಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ. ಭಾರೀ ಮಳೆಯಿಂದಾಗಿ ರವಿವಾರದ ಈ ಸರಣಿ ನಿರ್ಣಾಯಕ ಪಂದ್ಯ 3.3 ಓವರ್‌ಗಳಿಗೆ ಸೀಮಿತಗೊಂಡಿತ್ತು.

Advertisement

ನಿಯಮಾವಳಿ ಪ್ರಕಾರ, ಹೀಗೆ ರದ್ದುಗೊಂಡ ಪಂದ್ಯದಲ್ಲಿ ಒಂದು ಎಸೆತ ಎಸೆದರೂ ವೀಕ್ಷಕರಿಗೆ ಟಿಕೆಟ್‌ ಮೊತ್ತವನ್ನು ಮರಳಿಸಲಾಗುವುದಿಲ್ಲ. ಆದರೆ ಕೆಎಸ್‌ಸಿಎ ಮಾದರಿ ನಡೆಯಿರಿಸಿದ್ದು, ಎಲ್ಲ ಟಿಕೆಟ್‌ದಾರರಿಗೂ ಶೇ. 50ರಷ್ಟು ಹಣವನ್ನು ಮರಳಿಸಲು ನಿರ್ಧರಿಸಿದೆ ಎಂಬುದಾಗಿ ರಾಜ್ಯ ಕ್ರಿಕೆಟ್‌ ಮಂಡಳಿಯ ಖಜಾಂಚಿ ಹಾಗೂ ಕೆಎಸ್‌ಸಿಎಯ ಅಧಿಕೃತ ವಕ್ತಾರ ವಿನಯ್‌ ಮೃತ್ಯುಂಜಯ ಹೇಳಿದರು.

ಈ ಮೊತ್ತವನ್ನು ಎಲ್ಲಿ, ಯಾವಾಗ, ಹೇಗೆ ಪಡೆಯಬೇಕು ಎಂಬುದನ್ನು ಶೀಘ್ರದಲ್ಲೇ ತಿಳಿಸಲಾಗುವುದು. ವೀಕ್ಷಕರು ಮೂಲ ಟಿಕೆಟ್‌ಗಳನ್ನು ಹೊಂದಿರಬೇಕಾದುದು ಅತ್ಯಗತ್ಯ ಎಂದೂ ಅವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next