Advertisement

ರಾಜ್ಯ ಸರ್ಕಾರದಲ್ಲಿ ಹೆಚ್ಚಿದ ಕ್ಯಾಬಿನೆಟ್‌ ದರ್ಜೆ ಸಚಿವರ ಸಂಖ್ಯೆ: ರವಿಕುಮಾರ್‌

07:06 PM Mar 05, 2024 | Team Udayavani |

ಬಳ್ಳಾರಿ: ಕ್ಯಾಬಿನೆಟ್‌ ದರ್ಜೆ ಸಚಿವರ ಸಂಖ್ಯೆ ಹೆಚ್ಚಿಸುತ್ತಿರುವುದು, ಹೊಸ ಇನ್ನೋವಾ ಕಾರುಗಳನ್ನು ಖರೀದಿಸುತ್ತಿರುವುದು, ಸಿಎಂ ನಿವಾಸ ನವೀಕರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಬರಗಾಲ ಇಲ್ಲ ಎನಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ವ್ಯಂಗ್ಯವಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.15ರಷ್ಟು ಅಂದರೆ 34 ಕ್ಯಾಬಿನೆಟ್‌ ದರ್ಜೆ ಸಚಿವರು ಇರಬೇಕು. ಬಿಜೆಪಿ ಆಡಳಿತದಲ್ಲೂ ಅಷ್ಟೇ ಇದ್ದರು. ಇದೀಗ ಕಾಂಗ್ರೆಸ್‌ ಸರ್ಕಾರದಲ್ಲಿ 84 ಜನರಿಗೆ ಕ್ಯಾಬಿನೆಟ್‌ ದರ್ಜೆ ಸ್ಥಾನ ನೀಡಲಾಗಿದೆ. ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ, ಬಸವರಾಜ ರಾಯರಡ್ಡಿ, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಆರ್‌.ವಿ.ದೇಶಪಾಂಡೆ ಸೇರಿ ನಿಗಮ-ಮಂಡಳಿಗೆ ನೇಮಕವಾದವರಿಗೂ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಲಾಗಿದೆ.

ಜತೆಗೆ ಹೊಸದಾಗಿ 34 ಇನ್ನೋವಾ ಕಾರುಗಳನ್ನು ಖರೀದಿಸಲಾಗಿದೆ. 6 ಕೋಟಿ ರೂ. ಖರ್ಚು ಮಾಡಿ ಮುಖ್ಯಮಂತ್ರಿಗಳ ನಿವಾಸ ನವೀಕರಣ ಮಾಡಲಾಗಿದೆ. ರಾಜ್ಯದಲ್ಲಿ ಭರ್ತಿ ಮಾಡಲೇಬೇಕಿದ್ದ 2 ಲಕ್ಷ ಹುದ್ದೆಗಳು ಭರ್ತಿಯಾಗದೆ ಖಾಲಿಯಿದ್ದರೂ, ಹಿಂದೆ ಬಿಜೆಪಿ ಆಡಳಿತಾವ ಧಿಯಲ್ಲಿ ಶೇ.79ರಷ್ಟು ಇದ್ದ ಬದ್ಧತಾ ವೆಚ್ಚ ಕಾಂಗ್ರೆಸ್‌ ಸರ್ಕಾರದಲ್ಲಿ ಶೇ.103ಕ್ಕೆ ಏರಿಕೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next