Advertisement

ಬಸವಸಾಗರ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು

01:04 PM Jul 31, 2022 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಶುಕ್ರವಾರ ಬೆಳಗ್ಗೆಯಿಂದ 30 ಸಾವಿರ ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಬರುತ್ತಿದ್ದು, ಶನಿವಾರವೂ ಮುಂದುವರಿದಿದೆ.

Advertisement

ಹೀಗಾಗಿ ಜಲಾಶಯದ 4 ಕ್ರಸ್ಟ್‌ ಗೇಟ್‌ಗಳನ್ನು ತೆರೆದು 23 ಸಾವಿರ ಕ್ಯೂಸೆಕ್‌ ಮತ್ತು ಎಂಪಿಸಿಎಲ್‌ ಜಲ ವಿದ್ಯುತ್‌ ಸ್ಥಾವರದ ಮೂಲಕ 6 ಸಾವಿರ ಕ್ಯೂಸೆಕ್‌ ಸೇರಿ ಒಟ್ಟು 29 ಸಾವಿರ ಕ್ಯೂಸೆಕ್‌ ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ನಿರಂತರ ಒಳಹರಿವಿನಿಂದ ಜಲಾಶಯ ಶೇ.95ರಷ್ಟು ಭರ್ತಿಯಾಗಿದೆ.

ಪ್ರಸ್ತುತ ಜಲಾಶಯ ಗರಿಷ್ಠ ಮಟ್ಟ 492.25 ಮೀ.ನಲ್ಲಿ 491.93 ಮೀ. ನೀರಿದೆ. ಗರಿಷ್ಠ 33.31 ಟಿಎಂಸಿಯಲ್ಲಿ 31.82 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳಹರಿವು 30 ಸಾವಿರ ಕ್ಯೂಸೆಕ್‌ ಇದ್ದು, ಹೊರಹರಿವು 29 ಸಾವಿರ ಕ್ಯೂಸೆಕ್‌ ಇದೆ. ನೀರಾವರಿ ಕಾಲುವೆಗಳಿಗೆ 4 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿಸಲಾಗುತ್ತಿದೆ ಎಂದು ಕೆಬಿಜೆಎನ್ನೆಲ್‌ ಮೂಲಗಳಿಂದ ತಿಳಿದು ಬಂದಿದೆ.

ನಿತ್ಯ ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ, ಜಲಾಶಯದ ಗರಿಷ್ಠ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಒಂದೊಮ್ಮೆ ಬಸವಸಾಗರಕ್ಕೆ ಒಳಹರಿವು ಹೆಚ್ಚಾದರೆ ನದಿಗೆ ನೀರು ಹರಿಸುವುದನ್ನು ಹೆಚ್ಚಿಸಲಾಗುತ್ತದೆ. ಒಳಹರಿವು ಕಡಿಮೆಯಾದರೆ ಹೊರಹರಿವು ಕಡಿಮೆಗೊಳಿಸುತ್ತೇವೆ. -ಎಂ. ಪ್ರಕಾಶ, ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next