Advertisement

ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ

05:28 PM May 22, 2022 | Team Udayavani |

ಹೊಸಪೇಟೆ: ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, 72 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಶನಿವಾರ ಜಲಾಶಯಕ್ಕೆ ಹರಿದು ಬಂದಿದೆ.

Advertisement

ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ ದ್ವಿಗುಣಗೊಂಡಿದೆ. ಕೇವಲ ಮೂರು ದಿನದ ಅವಧಿಯಲ್ಲಿ ಜಲಾಶಯಕ್ಕೆ 8 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ.

ಕಳೆದ ಮೇ 18 ರಂದು ಜಲಾಶಯದಲ್ಲಿ ಕೇವಲ 650 ಕ್ಯೂಸೆಕ್‌, ಮೇ 19ಕ್ಕೆ 5269 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ ಮೇ 20ಕ್ಕೆ 33 ಸಾವಿರ ಕ್ಯೂಸೆಕ್‌ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಶನಿವಾರ ಒಳಹರಿವು ದ್ವಿಗುಣಗೊಂಡಿದ್ದು, 72 ಸಾವಿರ ಕ್ಯೂಸೆಕ್‌ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಜಲಾಶಯದ ಗರಿಷ್ಟ: 1633 ಅಡಿಗಳು, ಇಂದಿನ ಮಟ್ಟ 1600.11 ಅಡಿ, ಒಳಹರಿವು: 72592 ಕ್ಯೂಸೆಕ್‌, ಹೊರ ಹರಿವು: 229 ಕ್ಯೂಸೆಕ್‌, ಸಂಗ್ರಹ ಸಾಮರ್ಥ್ಯ ಗಿರಿಷ್ಠ: 100.855 ಟಿಎಂಸಿ, ಇಂದು (ಮೇ21)19.766 ಟಿಎಂಸಿಯಷ್ಟು ಸಂಗ್ರಹವಿದೆ. ಕಳೆದ ವರ್ಷ ಈ ದಿನದಲ್ಲಿ ನೀರಿನ ಮಟ್ಟ: 1585.63 ಅಡಿ, ಸಂಗ್ರಹ ಸಾಮರ್ಥ್ಯ: 6.925 ಟಿಎಂಸಿ, ಒಳಹರಿವು: 3995 ಕ್ಯೂಸೆಕ್‌, ಹೊರ ಹರಿವು: 241 ಕ್ಯೂಸೆಕ್‌ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಜಲಾಶಯದಲ್ಲಿ 13 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ ಹೀಗೆ ಮುಂದುವರಿದರೆ ಜೂನ್‌ ತಿಂಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next