Advertisement

ಎಲ್ಲ ಮಾದರಿಯ ಹಾಲಿನ ದರದಲ್ಲಿ ಮೂರು ರೂಪಾಯಿ ಹೆಚ್ಚಳ: ರೈತರ ಸಹಾಯಕ್ಕೆ ನಿಂತ ಕೆಎಂಎಫ್

03:40 PM Nov 14, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ (ಮಂಗಳವಾರ) ಹಾಲಿನ ದರದಲ್ಲಿ ಲೀಟರ್ ಗೆ ತಲಾ ಮೂರು ರೂಪಾಯಿಯಂತೆ ಹೆಚ್ಚಿಸಲ ಕೆಎಂಎಫ್ ನಿರ್ಧರಿಸಿದೆ. ಈ ಮೂಲಕ ರಾಸುಗಳ ಚರ್ಮ ಗಂಟು ರೋಗದಿಂದ ಸಂಕಷ್ಟದಲ್ಲಿರುವ ರೈತ ಸಮುದಾಯದ ನೆರವಿಗೆ ಕೆಎಂಎಫ್ ನಿಂತಿದೆ.

Advertisement

ಹೆಚ್ಚಳ ಮಾಡುವ ಮೂರು ರೂ. ರೈತರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ರೈತರ ಸಮಸ್ಯೆ ಅರಿತು ಅವರ ಸಹಾಯಕ್ಕೆ ಬರಲು ಈ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ:ಟೆಸ್ಟ್ ಮತ್ತು ಸೀಮಿತ ಓವರ್‌ ಗಳಿಗೆ ಭಿನ್ನ ತಂಡಗಳನ್ನು ಹೊಂದುವುದು ಉತ್ತಮ : ಕುಂಬ್ಳೆ

ಎಲ್ಲ ಮಾದರಿಯ ಹಾಲಿನ ದರವೂ ಮೂರು ರೂಪಾಯಿ ಹೆಚ್ಚಳವಾಗಿದ್ದು, 37 ರೂ ಇದ್ದ ಟೋನ್ಡ್ ಹಾಲಿನ ಬೆಲೆ ನಾಳೆಯಿಂದ 40 ರೂಪಾಯಿ ಆಗಲಿದೆ. ಇದೇ ರೀತಿ ಮೊಸರಿನ ಬೆಲೆಯಲ್ಲೂ ಮೂರು ರೂ. ಏರಿಕೆ ಮಾಡಲಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next