Advertisement

ಕಾಣಿಯೂರು: ಬೈತಡ್ಕ ಮಸೀದಿ ಬಳಿ ಅನುಮಾನಸ್ಪದ ವ್ಯಕ್ತಿ: ದೂರು

06:58 PM Jul 14, 2022 | Team Udayavani |

ಕಾಣಿಯೂರು: ಕೆಲವು ದಿನಗಳ ಹಿಂದೆ ಕಾರೊಂದು ಸೇತುವೆಗೆ ಢಿಕ್ಕಿಯಾಗಿ ಹೊಳೆಗೆ ಬಿದ್ದು ಇಬ್ಬರು ಸಾವಿಗೀಡಾದ ಪರಿಸರದಲ್ಲಿರುವ ಬೈತಡ್ಕ ಜುಮ್ಮಾ ಮಸೀದಿಯ ಬಳಿ ಕಳೆದೆರಡು ದಿನಗಳ ಹಿಂದೆ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ.

Advertisement

ಈ ಬಗ್ಗೆ ಜುಮ್ಮಾ ಮಸೀದಿ ದರ್ಗಾ ಶರೀಫ್ ಬೈತಡ್ಕ ಆಡಳಿತ ಸಮಿತಿ ವತಿಯಿಂದ ಆ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಎಸ್ಸೈ ರುಕ್ಮ ನಾಯ್ಕ್ ಅವರಿಗೆ ದೂರು ನೀಡಲಾಗಿದೆ.

ಈ ವೇಳೆ ಬೈತಡ್ಕ ಜಮಾಅತ್‌ ಅಧ್ಯಕ್ಷ ಅಬೂಬಕ್ಕರ್‌ ಹಾಜಿ, ಉಪಾಧ್ಯಕ್ಷ ಇಕ್ಬಾಲ್‌ ಬೈತಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್‌ ಅಲೆಕ್ಕಾಡಿ, ಜತೆ ಕಾರ್ಯದರ್ಶಿ ಅಬ್ದುಲ್ಲ ಕೆಲಂಬಿರಿ, ಕೋಶಾಧಿಕಾರಿ ಸಾಬು ಹಾಜಿ, ಸಮಿತಿ ಸದಸ್ಯರಾದ ಮೊಹಮ್ಮದ್‌ ಅಲೆಕ್ಕಾಡಿ, ಅಬ್ದುರ್ರಹ್ಮಾನ್‌ ಸಮಹಾದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next