Advertisement

ಶಾನಾಡಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ; ತಪ್ಪಿದ ಅನಾಹುತ

03:47 PM Dec 06, 2022 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾನಾಡಿ- ಶಿರಿಯಾರ ಸಂಪರ್ಕ ಕಲ್ಪಿಸುವ ರಸ್ತೆ ತಿರುವಿನಲ್ಲಿ ಕೆದೂರು ಗೇರು ಬೀಜ ಕಾರ್ಖಾನೆಯಿಂದ ಹೆಬ್ರಿ ಕಡೆಗೆ ಗೇರು ಸಿಪ್ಪೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

Advertisement

ತಪ್ಪಿದ ಅನಾಹುತ : ಶಾನಾಡಿ ತಿರುವಿನಲ್ಲಿರುವ ಮೋರಿಯ ಸಮೀಪದಲ್ಲಿ ಸಂಜೆ ವೇಳೆಗೆ ಪರಿಸರದ ಮಂದಿ ಸದಾ ಜಮಾಯಿಸುತ್ತಿದ್ದರು.

ಘಟನೆ ಸಂಭವಿಸುವ ಸಂದರ್ಭದಲ್ಲಿ ಯಾರು ಕೂಡಾ ಇಲ್ಲದೆ ಇರುವ ಪರಿಣಾಮ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next