Advertisement

ಅನಾರೋಗ್ಯದಿಂದ ಸಾಕಾನೆ ಸಾವು

05:31 PM Sep 25, 2021 | Team Udayavani |

ಹುಣಸೂರು.ನಾಗರಹೊಳೆ ವನ್ಯಜೀವಿ ವಲಯದ ದೊಡ್ಡಹರವೆ ಸಾಕಾನೆ ಶಿಬಿರದಲ್ಲಿ ಸುಮಾರು 66 ವರ್ಷ ಪ್ರಾಯದ ಸಾಕಾನೆಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ.

Advertisement

ಜೈಮಿನಿ ಸರ್ಕಸ್ ನಿಂದ ವಶಪಡಿಸಿಕೊಂಡಿದ್ದ ನಾಲ್ಕು ಆನೆಗಳನ್ನು ಪುನರ್ವಸತಿ ಕೇದ್ರದಲ್ಲಿ ಆರೈಕೆ ಮಾಡಲಾಗುತ್ತಿತ್ತು.ಈ ಪೈಕಿ 66 ವರ್ಷದ ಹೆಣ್ಣಾನೆಯು ಎರಡು ತಿಂಗಳಿನಿಂದ ಅನಾರೋಗ್ಯಕ್ಕೊಳಗಾಗಿತ್ತು.

ಇದನ್ನೂ ಓದಿ:ಚಿರತೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಪಲಾಯನ!

ವಿಷಯ ತಿಳಿದು ಸಾಕಾನೆ ಶಿಬಿರಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೆಶಕ ಡಿ ಮಹೇಶ್ ಕುಮಾರ್. ಎಸಿಎಪ್ ಸತೀಶ್ ಎ.ವಿ. ಆರ್ ಎಫ್ ಓ ಹನುಮಂತರಾಜು ಭೇಟಿ ನೀಡಿ ಪರಿಶೀಲಿಸಿದರು. ನಾಗರಹೊಳೆ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next