Advertisement

ನಿಂತಿದ್ದ ಟ್ರಕ್ಕಿನಿಂದ ಬಿದ್ದ ಚಾಲಕ-ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ

09:26 PM Sep 09, 2021 | Team Udayavani |

ದಾಂಡೇಲಿ : ಸರಕು ತುಂಬಿಕೊಂಡು ಬಂದಿದ್ದ ಟ್ರಕ್ಕನ್ನು ನಿಲ್ಲಿಸಿ, ಸರಕು ಕೆಳಗಿಳಿಸಲು ಕಟ್ಟಲಾದ ಹಗ್ಗವನ್ನು ತೆಗೆಯಲು ಟ್ರಕ್ಕಿನ ಮೇಲೆ ಹತ್ತಿದ್ದ ಚಾಲಕ ಮೇಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿನಲ್ಲಿ ನಡೆದಿದೆ.

Advertisement

ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿಗೆ ಪೋಲ್ಸ್ ತುಂಬಿಕೊಂಡು ಬಂದಿದ್ದ ಟ್ರಕ್ಕಿನಲ್ಲಿ ಸರಕಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಲು ಹೋದ ಟ್ರಕ್ಕಿನ ಚಾಲಕ, ಶಿವಮೊಗ್ಗ ಜಿಲ್ಲೆಯ ನಿವಾಸಿಯಾಗಿರುವ 58 ವರ್ಷ ವಯಸ್ಸಿನ ಚಂದ್ರಶೇಖರ.ಎಂ.ಎಸ್ ಅವರು ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ಏಟಿಗೆ ಕಣ್ಣು ಮತ್ತು ಕಿವಿಗೆ ಗಾಯವಾಗಿದೆ. ಘಟನೆ ನಡೆದ ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಗೊಂಡ ಚಂದ್ರಶೇಖರ್.ಎಂ.ಎಸ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next