Advertisement

ಯಲ್ಲಾಪುರ: ಕಾರಿಗೆ ಢಿಕ್ಕಿ ಹೊಡೆದ ಲಾರಿ; ಕಾರು ಚಾಲಕ ಸಾವು

08:14 PM Aug 15, 2022 | Team Udayavani |

ಯಲ್ಲಾಪುರ: ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ‌ ಕಾರು ಚಾಲಕ ಮೃತಪಟ್ಟ ಘಟನೆ  ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ 63  ಇಡಗುಂದಿ ಶೇಡಿಕೆರೆ ಗಣಪತಿ ಕಟ್ಟೆ ಬಳಿ ಸೋಮವಾರ  ಸಂಭವಿಸಿದೆ.

Advertisement

ಕಾರು ಚಾಲಕ ಸೋಮಪ್ಪ ಹೋಮವ್ವ ದೊಡ್ಡಮನೆ ಬೂದಿಹಾಳ ಮೃತ ವ್ಯಕ್ತಿ. ಇವರು ಕೊಪ್ಪಳದವ ಎನ್ನಲಾಗಿದೆ.

ಅತೀವೇಗ ನಿರ್ಲಕ್ಷ್ಯದಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಗಂಭೀರ ಗಾಯಗೊಂಡ ಕಾರು ಚಾಲಕನನ್ನು ಕಾರಿನ ಚಾಲಕನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದೆ. ಲಾರಿ ಚಾಲಕ ಲಾರಿ ಬಿಟ್ಟು ಸ್ಥಳದಿಂದ ನಾಪತ್ತೆಯಾಗಿದ್ದು  ಈತನ ಮಾಹಿತಿ ತಿಳಿದು ಬಂದಿಲ್ಲ. ಯಲ್ಲಾಪುರ ಠಾಣಾ ಸಿಪಿಐ ಸುರೇಶ ಯೆಳ್ಳೂರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next