Advertisement

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

03:14 PM Apr 08, 2022 | Team Udayavani |

ಹೊಸಪೇಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ ತಗುಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ‌ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮಹಳ್ಳಿ‌ ಗ್ರಾಮದಲ್ಲಿ‌‌ ಶುಕ್ರವಾರ ನಸುಕಿನಲ್ಲಿ ನಡೆದಿದೆ.

Advertisement

ಗ್ರಾಮದ 5 ನೇ ವಾರ್ಡಿನ‌ ನಿವಾಸಿ ರಾಘವೇಂದ್ರ ಶೆಟ್ಟಿ ಎಂಬುವವರ‌ ಮನೆಯಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ‌ ಬೆಂಕಿ ಹೊತ್ತಿಕೊಂಡಿದೆ.
ಈ ವೇಳೆ ರಾಘವೇಂದ್ರ ಶೆಟ್ಟಿ‌ ಮತ್ತು ಅವರ‌ ಪತ್ನಿ‌ ರಾಜಶ್ರೀ ಮನೆಯಿಂದ ಹೊರ ಬಂದಿದ್ದಾರೆ.

ಆದರೆ, ಮನೆಯ ಮಹಡಿಯ ಬೆಡ್ ರೂಮ್ ನಲ್ಲಿ ಮಲಗಿ ನಿದ್ರಿಸುತ್ತಿದ್ದ ರಾಘವೇಂದ್ರ ಶೆಟ್ಟಿಯವರ ಪುತ್ರ ವೆಂಕಟ್ ಪ್ರಸಾದ್ (42) ಅವರ ಪತ್ನಿ (38)ಚಂದ್ರಕಲಾ, ಮಕ್ಕಳಾದ ಅರ್ದ್ವಿಕ್ (16) ಹಾಗೂ‌ ಪ್ರೇರಣಾ (8‌) ಮನೆಯಿಂದ ನಿಂದ ಹೊರ‌‌ ಬರಲು ಆಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮರಿಯಮ್ಮನಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next