Advertisement

ಸಿದ್ದಾಪುರ: ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗೆ ಕಾಮೆಂಟ್‌ ಹಾಕಿದ್ದಕ್ಕೆ ತಂಡದಿಂದ ಹಲ್ಲೆ 

10:43 PM Jun 20, 2022 | Team Udayavani |

ಸಿದ್ದಾಪುರ: ಮೊಬೈಲ್‌ ಸ್ಟೇಟಸ್‌ಗೆ ಕಾಮೆಂಟ್‌ ಹಾಕಿದ್ದಕ್ಕೆ ಆರೋಪಿಗಳು ವ್ಯಕ್ತಿಯನ್ನು ಸಿದ್ದಾಪುರಕ್ಕೆ ಕರೆಯಿಸಿ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹಲ್ಲೆಗೊಳಗಾದ ಆಜ್ರಿ ಗ್ರಾಮದ ತೆಂಕಬೈಲು ರಾಘವೇಂದ್ರ ಕುಲಾಲ (27) ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಆರೋಪಿ ಮೃತ್ಯುಂಜಯ ಮೂರು ದಿನದ ಹಿಂದೆ ತನ್ನ ಮೊಬೈಲ್‌ನಲ್ಲಿ ವಾಟ್ಸ್‌ ಆ್ಯಪ್‌ ಸ್ಟೇಟಸ್‌ ಒಂದನ್ನು ಹಾಕಿಕೊಂಡಿದ್ದರು. ಸ್ಟೇಟಸ್‌ಗೆ ರಾಘವೇಂದ್ರ ಕುಲಾಲ ಕಾಮೆಂಟ್‌ ಹಾಕಿದ್ದರು. ಈ ವಿಷಯಕ್ಕೆ ಆರೋಪಿಗಳಾದ ಕಮಲಾಕರ ಹಾಗೂ ವಿಕಾಸ್‌ ಜೂ. 19ರಂದು ಮೊಬೈಲ್‌ ಮೂಲಕ ಬೆದರಿಕೆ ಹಾಕಿದ್ದರು. ಅನಂತರ ಪ್ರದೀಪ ಮತ್ತು ಅರುಣ್‌ ಶೆಟ್ಟಿ, ರಾಘವೆಂದ್ರ ಅವರಿಗೆ ಮೊಬೈಲ್‌ ಕರೆ ಮಾಡಿ ಸಿದ್ದಾಪುರಕ್ಕೆ ಬರುವಂತೆ ಹೇಳಿದ್ದರು.

ಆರೋಪಿಗಳು ರಾಘವೇಂದ್ರ ಕುಲಾಲ ಅವರನ್ನು ಪೇಟೆಯಿಂದ ಸರಕಾರಿ ಪ್ರೌಢಶಾಲೆಯ ಮೈದಾನಕ್ಕೆ ಕರೆಯಿಸಿಕೊಂಡು, ಮತ್ತೂಂದಷ್ಟು ಜನರನ್ನು ಸೇರಿಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು. ಮರದ ದೊಣ್ಣೆ, ಚಾಕುವಿನಿಂದ, ಕಾಲಿನಿಂದ ತುಳಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next