Advertisement

ಸಾಗರ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

11:48 AM Jun 14, 2022 | Suhan S |

ಸಾಗರ: ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಾಸ್ಪಾಡಿಯ ಮಳಲಿಕೊಪ್ಪದಲ್ಲಿ ನಡೆದಿದೆ.

Advertisement

ರಾಜೇಶ್ವರಿ ಮೃತ ಗೃಹಿಣಿ. ಎರಡು ಮೂರು ಬಾರಿ ಗರ್ಭಪಾತವಾದ್ದರಿಂದ ಬೇಸರಗೊಂಡು ಅವರು  ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅನುಮಾನಿಸಲಾಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ರಾಜೇಶ್ವರಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಎರಡು ವರ್ಷದ ಹಿಂದೆ ನವೀನ್ ಕುಮಾರ್ ಅವರೊಂದಿಗೆ ರಾಜೇಶ್ವರಿ ಅವರ ವಿವಾಹವಾಗಿತ್ತು. ಈ ಕುರಿತು ಮೃತಳ ತಾಯಿ ಶೇಖಮ್ಮ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next