Advertisement

ಪುತ್ತೂರು: ಲಾರಿ- ಸ್ಕೂಟಿ ನಡುವೆ ಢಿಕ್ಕಿ; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

11:23 AM Nov 10, 2021 | Team Udayavani |

ಪುತ್ತೂರು: ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರಿನ ಹೊರ ವಲಯದ ಮೊಟ್ಟೆತಡ್ಕದಲ್ಲಿ ಅ.9 ರಂದು ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಓರ್ವ ಬುಧವಾರ ಮೃತಪಟ್ಟಿದ್ದಾರೆ.

Advertisement

ಸಹ ಸವಾರ ಕುರಿಯ ಬಳ್ಳಮಜಲು ನಿವಾಸಿ ವಸಂತ ರೈ ಮೃತರು.  ಸವಾರ ಕುರಿಯ ಬಳ್ಳಮಜಲು ನಿವಾಸಿ ನಾರಾಯಣ ನಾಯ್ಕ ಗಂಭೀರ ಗಾಯಾಳು.

ದ್ವಿ ಚಕ್ರ ವಾಹನ ಸವಾರರಿಬ್ಬರು ಗಾರೆ ಕೆಲಸದವರಾಗಿದ್ದು ಸೆಂಟ್ರಿಗ್‌ ಕೆಲಸಕ್ಕೆ ಹೋಗಿ ಪುತ್ತೂರಿನಿಂದ ವಾಪಸು ಕುರಿಯಕ್ಕೆ ಬರುತಿದ್ದಾಗ ಮೊಟ್ಟೆತಡ್ಕದ ಎನ್‌ ಆರ್‌ ಸಿಸಿ ಬಳಿ ಪಂಜಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಟಿಪ್ಪರ್‌ ಲಾರಿಗೆ ಡಿಕ್ಕಿ ಹೊಡೆದಿತ್ತು.

ಢಿಕ್ಕಿಯ ರಬ್ಬಸಕ್ಕೆ ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆಗೆ ಅಪ್ಪಳಿಸಿದ್ದು ಇದರಿಂದ ಕಾಲು ತುಂಡಾಗಿದೆ. ಸವಾರಿಬ್ಬರು ಹೆಲ್ಮೇಟ್‌ ಧರಿಸಿದ್ದು ಹೀಗಾಗಿ ತಲೆ ಭಾಗಕ್ಕೆ ಯಾವುದೇ ಗಾಯ ಉಂಟಾಗಿಲ್ಲ. ಗಾಯಾಳುಗಳನ್ನು ಮೊದಲು ಪುತ್ತೂರಿನ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ,ಜೆ ಆಸ್ಫತ್ರೆಗೆ ದಾಖಲಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next