Advertisement

ಪಿರಿಯಾಪಟ್ಟಣ: ಬೆಂಕಿ ಶಾಖ; ಉಸಿರುಗಟ್ಟಿ ರಾಸು,ಕೋಳಿಗಳು ಸಾವು

06:48 PM Aug 10, 2022 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದಲ್ಲಿ 5 ಹಸುಗಳು ಮತ್ತು ಕೋಳಿಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದ ರಾಜೇಗೌಡ ರವರ ಮಗ ಪ್ರಕಾಶ್ ಎಂಬುವವರ ತಂಬಾಕು ಹದ ಮಾಡುವ ಬ್ಯಾರನ್ ಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ಕೊಟ್ಟು ಹಾಕಲಾಗಿದ್ದು, ರಾತ್ರಿ ವೇಳೆ ಐದು ರಾಸುಗಳು ಮತ್ತು ಹಲವಾರು ಕೋಳಿಗಳು ತಂಬಾಕು ಬ್ಯಾರನ್ ನಲ್ಲಿ ತಂಬಾಕಿನ ಎಲೆಗಳನ್ನು ಹದ ಮಾಡಲು ಪೈಪ್ ಗಳ ಮೂಲಕ ಹಾಕಲಾದ ಬೆಂಕಿ ಶಾಖ ಹೆಚ್ಚಾಗಿ ಶಾಖ ಹೊರಗೆ ಹೋಗಲಾರದೆ ಕೊಟ್ಟಿಗೆಯ ತುಂಬೆಲ್ಲ ತುಂಬಿಕೊಂಡಿದ್ದು ಹಸು ಮತ್ತು ಕೋಳಿಗಳಿಗೆ ಉಸಿರಾಟ ಆಡಲಾಗದೆ ಆಕ್ಸಿಜನ್ ದೊರೆಯದೆ ಸ್ಥಳದಲ್ಲೇ ಸಾವನ್ನಪ್ಪಿವೆ.

ತಂಬಾಕು ಬ್ಯಾರೆನ್ ನ ಒಳಗಿದ್ದ ಪೈಪ್ ಒಡೆದು ಶಾಖ ಹೊರ ಬಂದ ಕಾರಣ ಈ ಘಟನೆ ಜರುಗಿದೆ ಎಂದು ಅಂದಾಜಿಸಲಾಗಿದೆ. ರಾತ್ರಿ ಕಟ್ಟಿ ಹಾಕಲಾಗಿದ್ದ ಪ್ರಾಣಿಗಳು ಬೆಳಗಾಗುವುದರಷ್ಟ್ರಲ್ಲಿ ಸಾವನಪ್ಪಿವೆ. ಇದರಿಂದ ಪ್ರಕಾಶ್ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next