Advertisement

ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ

02:41 PM Dec 08, 2021 | Team Udayavani |

ಪಿರಿಯಾಪಟ್ಟಣ: ತಾಲೂಕಿನ ರಾಣಿಗೇಟ್ ಹಾಡಿನ ಜೇನುಕುರುಬ ಸಮಾಜದ ಬಸವ ಎಂಬುವವರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುಂಡು ಹಾರಿಸಿ ಕೊಲೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ತಹಶೀಲ್ದಾರ್ ಕೆ.ಚಂದ್ರಮೌಳಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜೇನು ಕುರುಬ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಲಿಂಗಾಪುರ ಬಸಪ್ಪ ಮಾತನಾಡಿ ಡಿ.1 ರ  ಬುಧವಾರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ತನ್ನ ಜಮೀನಿನಲ್ಲಿ ಮುಸುಕಿನ ಜೋಳ ತುಂಬಿಸಿ ನಂತರ ಜಮೀನಿನಲ್ಲಿ. ಬಯಲು ಮಲ ವಿಸರ್ಜನೆ ಮಾಡುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಮಂಜುನಾಥ್, ಸಿದ್ದು, ಹಾಗೂ ಮಹೇಶ್ ಎಂಬುವವರು ಬಸವನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಪ್ರಯತ್ನ ಮಾಡಿದ್ದಾರೆ ಆದ್ದರಿಂದ ಇವರ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಗುಂಡಿನ ದಾಳಿಗೆ ತುತ್ತಾಗಿರುವ ಬಸವನ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಿ ಸೂಕ್ತ ನ್ಯಾಯ ಕೊಡಿಸಬೇಕು, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕೂಡಲೇ ಬಂಧಿಸಬೇಕು,  ಅರಣ್ಯಗಳಲ್ಲಿ ವಾಸಿಸುವ ಹಾಡಿ ಜನರಿಗೆ ಅರಣ್ಯ ಉತ್ಪನ್ನಗಳಾದ ಸೌದೆ, ಜೇನು, ನೆಲ್ಲಿಕಾಯಿ, ಮರದಪಾಚಿ ಸೇರಿದಂತೆ ಇನ್ನಿತರ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜೇನು ಕುರುಬ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಜೆ.ಟಿ.ರಾಜಪ್ಪ, ಉಪಾಧ್ಯಕ್ಷ ಬಸವಣ್ಣ, ಸಹ ಕಾರ್ಯದರ್ಶಿ ಭಾಸ್ಕರ್, ಪದಾಧಿಕಾರಿಗಳಾದ ಮೋಹನ್ ಕುಮಾರ್, ನಾಗ, ಸ್ವಾಮಿ, ಪ್ರತಾಪ್, ಸುಂದರ್, ರಮೇಶ್, ಅಣ್ಣು, ಮರಿ, ನಾಗಪ್ಪ, ಕರ್ಕಾಟಕ ನವ ನಿರ್ಮಾಣ ವೇದಿಕೆಯ ಮುಖಂಡರಾದ ಪಿ.ಪಿ.ಮಹದೇವ್, ಹೆಚ್.ಡಿ.ರಮೇಶ್, ಪಿ.ಮಹದೇವ್, ಉತ್ತೇನಹಳ್ಳಿ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next