Advertisement

ಮಂಗಳೂರು: ಬ್ಯಾಂಕ್‌ ನಿವೃತ್ತ ಉದ್ಯೋಗಿಯ ಶವ ನದಿಯಲ್ಲಿ ಪತ್ತೆ

08:55 PM Jul 24, 2022 | Team Udayavani |

ಮಂಗಳೂರು: ರಕ್ತದೊತ್ತಡ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆಂದು ಹೋಗಿದ್ದ ಬ್ಯಾಂಕ್‌ ನಿವೃತ್ತ ಉದ್ಯೋಗಿ, ಕಣ್ಣೂರು ಚೆಕ್‌ಪೋಸ್ಟ್‌ ಬಳಿಯ ಬೀಡು ನಿವಾಸಿ ವಿಶ್ವನಾಥ (65) ಅವರ ಮೃತದೇಹ ರವಿವಾರ  ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಆಡಂಕುದ್ರು ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

Advertisement

ಶನಿವಾರ ಬೆಳಗ್ಗೆ 9 ಗಂಟೆಗೆ ರಕ್ತದೊತ್ತಡ ಪರೀಕ್ಷೆ ಮಾಡಿಸಲು ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರು. ಮಧ್ಯಾಹ್ನ 12.25ಕ್ಕೆ ಅವರ ಪತ್ನಿ ಕರೆ ಮಾಡಿದಾಗ ಸಂಬಂಧಿಕರಾದ ಸರೋಜಿನಿ ಅವರು ಕರೆ ಸ್ವೀಕರಿಸಿ ವಿಶ್ವನಾಥ ಅವರು ಮೊಬೈಲ್‌ ಹಾಗೂ ಪರ್ಸ್‌ ಬಿಟ್ಟು ನದಿಯ ಕಡೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವನಾಥ ಅವರಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಪೊಲೀಸರಿಗೆ ದೂರು ನೀಡಲಾಗಿತ್ತು.

ನೀರಿಗೆ ಹಾರಿರುವ ಶಂಕೆಯಿಂದ ರವಿವಾರ ನದಿಯಲ್ಲಿ ಹುಡುಕಾಟ ನಡೆಸಲಾಗಿದ್ದು ನೇತ್ರಾವತಿ ಸೇತುವೆ ಬಳಿ ಶವ ಪತ್ತೆಯಾಗಿದೆ. ಯಾವುದೋ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next