Advertisement

ನಾಲತವಾಡ: ಏಕಾಏಕಿ ಜಮೀನಿಗೆ ನುಗ್ಗಿದ ಬಸ್‌ ;15 ಮಂದಿಗೆ ಗಾಯ

07:23 PM Jul 26, 2022 | Team Udayavani |

ನಾಲತವಾಡ (ವಿಜಯಪುರ): ಚಲಿಸುತ್ತಿದ್ದ ಬಸ್ಸೊಂದು ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ರಸ್ತೆಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಬಸ್‌ನಲ್ಲಿದ್ದ 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಿರ್ವಾಹಕ ದಸ್ತಗಿರಿಸಾಬ್ ವಾಲೀಕಾರ್‌ಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಸಂಜೆ ನಾಲತವಾಡ ರಸ್ತೆಯಲ್ಲಿ ಬಸ್‌ ಹೋಗುತ್ತಿದ್ದ ವೇಳೆ ಬಸ್ಸಿನ ಪಾಟ ( ಬ್ಲೇಡ್‌ ಸೆಟ್) ತುಂಡು ಹಾಕಿ ಏಕಾಏಕಿ ಬಸ್‌ ತಿರುಗಿ ವಿದ್ಯುತ್‌ ಕಂಬಕ್ಕೆ ಗುದ್ದಿದೆ. ಅದೃಷ್ಟವಶಾತ್‌ ಆ ಕಂಬಕ್ಕೆ ವಿದ್ಯುತ್‌ ಇರಲಿಲ್ಲ. ಆ ಬಳಿಕ ಜಮೀನಿಗೆ ನುಗ್ಗಿದೆ.

ಬಸ್ ಚಾಲಕ ರಾಯಗೊಂಡ ಬಿರಾದಾರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next